ಸುಮಲತಾ ಹೆಸರೇಳಿಕೊಂಡು ರಾಜಕೀಯ ಮಾಡುವ ದುಸ್ಥಿತಿ ನಮಗೆ ಬಂದಿಲ್ಲ- ಶಿವರಾಮೇಗೌಡ ವಾಗ್ದಾಳಿ

ಶನಿವಾರ, 12 ಅಕ್ಟೋಬರ್ 2019 (12:22 IST)
ಮಂಡ್ಯ : ಸುಮಲತಾ ಹೆಸರೇಳಿಕೊಂಡು ರಾಜಕೀಯ ಮಾಡುವ ದುಸ್ಥಿತಿ ನಮಗೆ ಬಂದಿಲ್ಲ ಎಂದು ಮಾಜಿ ಸಂಸದ ಎಲ್​​ ಆರ್​ ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.




ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಹಿಂದಿನ ಸರ್ಕಾರವೇ ಕಾರಣ ಎಂಬ ಸುಮಲತಾ ಆರೋಪ ವಿಚಾರದ ಬಗ್ಗೆ  ಮಾತನಾಡಿದ ಅವರು, ನಮ್ಮಿಂದ ತಪ್ಪಾಗಿದೆ ನೀವು ಅಧಿಕಾರದಲ್ಲಿದ್ದೀರಿ ಸಮಸ್ಯೆ ಬಗೆಹರಿಸಿ ಅದನ್ನು ಬಿಟ್ಟು ಕೆಸರೆರಚಾಡಿಕೊಂಡ್ರೆ ಪ್ರಯೋಜನವಿಲ್ಲ. ಸಂಸದರೂ ತಮ್ಮ ಕೆಲಸ ಮಾಡಬೇಕು, ಶಾಸಕರೂ ತಮ್ಮ ಕೆಲಸ ಮಾಡಬೇಕು. ಶಾಸಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ನಮ್ಮ ಶಾಸಕರು ಹಾಗೆ ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.


ಕೆ.ಆರ್.ಪೇಟೆಗೆ ಹೋದರೇ ಬಿಜೆಪಿ ಜತೆ ಹೋಗ್ತಾರೆ. ನಾಗಮಂಗಲಕ್ಕೆ ಬಂದ್ರೆ ಕಾಂಗ್ರೆಸ್ ಜೊತೆ ಹೋಗುತ್ತಾರೆ. ಅವರ ಪಕ್ಷ ಯಾವುದೆಂದು ಮೊದಲು ತೀರ್ಮಾನಿಸಲಿ. ಯಾರಾದರೂ ಮತ ಹಾಕಿದ್ರೆ ಅವರ ಮನೆಯಲ್ಲಿ ಹೋಗಿ ಊಟ ಮಾಡಲಿ. ನಾವು ಜೆಡಿಎಸ್ ಕಚೇರಿಗೆ ಸಂಸದೆ ಸುಮಲತಾ ಅವರನ್ನು ಕರೆಯುವುದಿಲ್ಲ ಎಂದು ಸುಮಲತಾ ವಿರುದ್ಧ ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ