ತಮ್ಮ ಮೇಲೆ ಆರೋಪ ಮಾಡುತ್ತಿರುವ ಪ್ರತಿಪಕ್ಷ ನಾಯಕರಿಗೆ ಆನಂದ್ ಸಿಂಗ್ ಹೇಳಿದ್ದೇನು?

ಸೋಮವಾರ, 17 ಫೆಬ್ರವರಿ 2020 (11:26 IST)
ಬೆಂಗಳೂರು : ಪ್ರತಿಪಕ್ಷ ನಾಯಕರು ಅರಣ್ಯ ಸಚಿವ ಆನಂದ್ ಸಿಂಗ್ ಮೇಲೆ ಆರೋಪ ಮಾಡುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಆನಂದ್ ಸಿಂಗ್ ತಿರುಗೇಟು ನೀಡಿದ್ದಾರೆ.

ಬಗ್ಗೆ ಮಾತನಾಡಿದ ಅವರು, ಈಗ ಬಿಜೆಪಿ ಸೇರಿದ ಮೇಲೆ ನನ್ನ ವಿರುದ್ಧ ಆರೋಪ ಬಂದಿಲ್ಲ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವಾಗಲೇ ಆರೋಪವಿತ್ತು. ಆಗಲೇ ಕಾಂಗ್ರೆಸ್ ನವರು ಹೇಳಬಹುದಿತ್ತು. ನಿನ್ನ ಮೇಲೆ ಆರೋಪವಿದೆ, ನೀನು ಬರಬೇಡ ಅನ್ನಬಹುದಿತ್ತು. ಆಗ ಸುಮ್ಮನಿದ್ದವರು ಈಗ ಆರೋಪ ಮಾಡ್ತಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.

 

ಪ್ರತಿಪಕ್ಷ ನಾಯಕರು ಆರೋಪಿಸುವುದು ಅವರ ಸ್ವಾತಂತ್ರ್ಯ. ನಾನು ಕೊಟ್ಟಿರುವ ಅಫಿಡವಿಟ್ ನಲ್ಲಿ ಎಲ್ಲ ವಿವರಗಳೂ ಇವೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ