ನೈಟ್ ಕರ್ಪ್ಯೂ ಜಾರಿ ಬಗ್ಗೆ ಸಮರ್ಥನೆ ನೀಡಿದ ಆರೋಗ್ಯ ಸಚಿವರು

ಗುರುವಾರ, 24 ಡಿಸೆಂಬರ್ 2020 (12:38 IST)
ಬೆಂಗಳೂರು : ನೈಟ್ ಕರ್ಪ್ಯೂ ಜಾರಿ ಕಾಟಚಾರಕ್ಕೆ ಮಾಡಿದ್ದು ಎಂಬ ಮಾತು ಕೇಳಿಬಂದ ಹಿನ್ನಲೆಯಲ್ಲಿ  ಈ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ್ ಸಮರ್ಥನೆ ನೀಡಿದ್ದಾರೆ.

ಹೊಸ ವರ್ಷದ ವೇಳೆ 11ರ  ನಂತರ ಪಾರ್ಟಿ ಮಾಡ್ತಾರೆ. ಈ ಪಾರ್ಟಿ ಮಾಡೋರಿಗೆ ಕಡಿವಾಣ ಹಾಕಲು ಕರ್ಪ್ಯೂ ಜಾರಿ ಮಾಡಲಾಗಿದೆ. ರಾತ್ರಿ 8 ರಿಂದಲೇ ಕರ್ಪ್ಯೂಗೆ ಸಲಹೆ ಬಂದಿತ್ತು. ಆರ್ಥಿಕ ದೃಷ್ಟಿಯಿಂದ ರಾತ್ರಿ 11ರಿಂದ ಕರ್ಪ್ಯೂ ಜಾರಿ ಮಾಡಲಾಗಿದೆ. ವ್ಯಾಪಾರಿಗಳು 1ದಿನ ಅವಕಾಶ ಕೇಳಿದ್ರು, ಕರ್ಪ್ಯೂ ಸಿದ್ಧತೆಗೆ ಸಮಯ ಕೇಳಿದ್ರು. ಹಾಗಾಗಿ ನಿನ್ನೆ ಬದಲು ಇಂದಿನಿಂದ ಕರ್ಪ್ಯೂ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ