ಆಂಧ್ರದಿಂದ ಬಂದು ಸುಳ್ಳು ಹೇಳಿದ ಕುಟುಂಬಕ್ಕೆ ಅಧಿಕಾರಿಗಳು ಮಾಡಿದ್ದೇನು?

ಶನಿವಾರ, 23 ಮೇ 2020 (12:05 IST)
ಆಂಧ್ರಪ್ರದೇಶದಿಂದ ಬಂದ ಕುಟುಂಬವೊಂದು ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಸುಳ್ಳು ಹೇಳಿ ಮನೆ ಸೇರಿಕೊಂಡಿದ್ದರು.

ಜಿಲ್ಲಾಡಳಿತಕ್ಕೆ ಮಾಹಿತಿ‌ ನೀಡದೆ ಮನೆ ಸೇರಿದ್ದ ನಾಲ್ವರನ್ನು ತಡರಾತ್ರಿ ಆರೋಗ್ಯ ಇಲಾಖೆ ‌ಅಧಿಕಾರಿಗಳು  ಕರೆದೊಯ್ದ ಘಟನೆ ಹುಬ್ಬಳ್ಳಿಯ ಅಶೋಕ ನಗರದಲ್ಲಿ ನಡೆದಿದೆ.‌ ಆಂಧ್ರಪ್ರದೇಶದಿಂದ ಬಂದಿದ್ದ ಕುಟುಂಬವೊಂದು ಚೆಕ್ ಪೋಸ್ಟ್ ನಲ್ಲಿ ಸುಳ್ಳು ಹೇಳಿ ಮನೆ ಸೇರಿಕೊಂಡಿದ್ದರು.

ಹೊರರಾಜ್ಯದಿಂದ ಬಂದಿದ್ದರೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ. ‌ಈ ವಿಷಯ ತಿಳಿದ ತಕ್ಷಣ ತಡರಾತ್ರಿ ಅವರನ್ನು ಆಂಬ್ಯುಲೆನ್ಸ್ ನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು  ಕರೆದುಕೊಂಡು ಹೋಗಿದ್ದಾರೆ.

ಕಳೆದ ಮಾರ್ನಾಲ್ಕು ದಿನಗಳ ಹಿಂದೆಯೇ ಈ ಕುಟುಂಬ ಹುಬ್ಬಳ್ಳಿಗೆ ಆಗಮಿಸಿ ಅಶೋಕನಗರದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿತ್ತು. ಹೀಗಾಗಿ ಗಂಡ-ಹೆಂಡತಿ ಇಬ್ಬರು ಮಕ್ಕಳನ್ನು ಅಧಿಕಾರಿಗಳು  ಕರೆದುಕೊಂಡು ಹೋಗಿದ್ದು, ಸದ್ಯ ಅಪಾರ್ಟ್ ಮೆಂಟ್ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ