ಅಪ್ರಾಪ್ತೆಗೆ ತಾಳಿ ಕಟ್ಟಿದ ಪ್ರೇಮಿ ಆಮೇಲೆ ಮಾಡಿದ್ದೇನು?

ಬುಧವಾರ, 1 ಜನವರಿ 2020 (11:15 IST)
ಬಾಗಲಕೋಟೆ : ಪ್ರೇಮಿಯೊಬ್ಬ ಅಪ್ರಾಪ್ತೆಗೆ ತಾಳಿ ಕಟ್ಟಿ ವಿಷ ಕುಡಿಸಿ ಕೊಂದ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನಲ್ಲಿ ನಡೆದಿದೆ.


20 ವರ್ಷದ ಕುಮಾರ್ ಈ ಕೃತ್ಯ ಎಸಗಿದ ಆರೋಪಿ. ಬಾಲಕಿ ಹಾಗೂ ಕುಮಾರ್ಕೆಲ ತಿಂಗಳಿಂದ ಪರಸ್ಪರ ಪ್ರೀತಿಸ್ತಿದ್ದು, ನಿನ್ನೆ ಬಾಲಕಿ ಶಾಲೆಗೆ ಹೋಗಿದಾಗ ಕರೆದೊಯ್ದು ಕುಮಾರ್ ಆಕೆಗೆ ಅರಶಿನ ತಾಳಿ ಕಟ್ಟಿ ವಿಷ ಕುಡಿಸಿ ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.


 

ಅಸ್ವಸ್ಥ ಕುಮಾರ್ ಗುಳೇದಗುಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,  ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ