ತಬ್ಲಿಘಿ ಕಾಟ ಮತ್ತೆ ಶುರು? : ತಬ್ಲಿಘಿ ಜಮಾತ್ ಹೋಗಿ ಬಂದವನಿಗೆ ಕೊರೊನಾ

ಗುರುವಾರ, 4 ಜೂನ್ 2020 (18:31 IST)
ಹಿಂದೊಮ್ಮೆ ದೇಶದಲ್ಲಿ ತೀವ್ರ ಆತಂಕ, ಚರ್ಚೆಗೆ ಕಾರಣವಾಗಿದ್ದ ತಬ್ಲಿಘಿಯಿಂದ ಮತ್ತೆ ಇದೀಗ ಯುವಕನೊಬ್ಬನಲ್ಲಿ ಕೊರೊನಾ ಕಾಣಿಸಿಕೊಂಡಿದೆ.

ಉತ್ತರಪ್ರದೇಶದ ಬಿಜ್ನೋರ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಗೆ ಹೋಗಿ ಬಂದಿದ್ದ ತಿಪಟೂರು ಮೂಲದ  ಯುವಕನಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ.

ತಿಪಟೂರಿನ 24 ವರ್ಷದ ಯುವಕನಿಗೆ ಕೋವಿಡ್ - 19 ಪಾಸಿಟಿವ್ ಬಂದಿದ್ದು, ಈತನಿಗೆ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಸದ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾರ್ಚ್ 10 ರಂದು ಸೋಂಕಿತ ಯುವಕ ಹಾಗೂ ತುಮಕೂರಿನ ಮರಳೂರು ದಿಣ್ಣೆಯ ಐದು ಮಂದಿ ಒಟ್ಟು ಏಳು ಜನರು ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಗೆ ಹೋಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ