ಪತ್ನಿಯ ತಲೆ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಪತಿರಾಯ!

ಭಾನುವಾರ, 2 ಫೆಬ್ರವರಿ 2020 (09:32 IST)
ಲಕ್ನೋ: ಕ್ಷುಲ್ಲುಕ ಕಾರಣಕ್ಕೆ ಪತ್ನಿಯ ರುಂಡ ಕತ್ತರಿಸಿ ಕೊಲೆ ಮಾಡಿದ್ದಲ್ಲದೆ, ಆಕೆಯ ರುಂಡ ಹಿಡಿದು ಪೊಲೀಸ್ ಠಾಣೆಗೇ ತಂದ ಘಟನೆ ಉತ್ತರ ಪ್ರದೇಶದ ಜಹೀಂಗಾರ್ ಬಾದ್ ಬಳಿ ನಡೆದಿದೆ.


ಅಖಿಲೇಶ್ ರಾವತ್ ಈ ಕೃತ್ಯವೆಸಗಿದಾತ. ಪತ್ನಿಯ ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದಾಗ ಆರೋಪಿ ಅಖಿಲೇಶ್ ನನ್ನು ಪೊಲೀಸರು ಬಂಧಿಸಿದರು. ಈ ವೇಳೆ ಆತ ಇದ್ದಕ್ಕಿದ್ದಂತೆ ರಾಷ್ಟ್ರಗೀತೆ ಹಾಡಿದ್ದಲ್ಲದೆ, ವಂದೇ ಮಾತರಂ ಹಾಡಲು ಆರಂಭಿಸಿದ್ದ.

ಅಳಿಯನ ಕೃತ್ಯದ ಬಗ್ಗೆ ಮಾತನಾಡಿರುವ ಮಾವ ಮೂರು ವರ್ಷದ ಹಿಂದೆಯೇ ಮಗಳನ್ನು ಅಖಿಲೇಶ್ ಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಕೆಲವು ದಿನಗಳಿಂದ ಚಿನ್ನದ ಸರಕ್ಕಾಗಿ ಬೇಡಿಕೆಯಿಟ್ಟಿದ್ದ. ಅದನ್ನು ಕೊಡದೇ ಇದ್ದಿದ್ದಕ್ಕೆ ಈ ಕೃತ್ಯವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ