ಭಾರತದ ಸೈನಿಕರ ವಿರುದ್ಧ ಮತ್ತೊಂದು ಪಿತೂರಿ ರೂಪಿಸಿದ ಪಾಕಿಸ್ತಾನ; ಸೈನಿಕರ ಆಹಾರದಲ್ಲಿ ವಿಷ ಬೆರೆಸಲು ಷಡ್ಯಂತ್ರ

ಶನಿವಾರ, 2 ಮಾರ್ಚ್ 2019 (11:43 IST)
ನವದೆಹಲಿ : ಪುಲ್ವಾಮಾ ಉಗ್ರ ದಾಳಿಯ ನಂತರ ಪಾಕಿಸ್ತಾನ ಇದೀಗ ಭಾರತದ ಸೈನಿಕರ ವಿರುದ್ಧ ಮತ್ತೊಂದು ಸಂಚು ರೂಪಿಸುತ್ತಿದೆ ಎಂದು ಗುಪ್ತಚರ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.


ಹೌದು. ಜಮ್ಮು ಕಾಶ್ಮೀರದಲ್ಲಿರುವ ಭಾರತದ ಸೈನಿಕರ ಆಹಾರದಲ್ಲಿ ವಿಷ ಬೆರೆಸಲು ಪಾಕಿಸ್ತಾನ  ಸೇನೆ ಹಾಗೂ ಐ.ಎಸ್.ಐ ರೂಪಿಸಿದ ಷಡ್ಯಂತ್ರ  ಇದೀಗ ಬಯಲಾಗಿದೆ. ಕಾಶ್ಮೀರದಲ್ಲಿರುವ ಪಾಕ್ ಏಜೆಂಟ್ ಗಳ ಮೂಲಕ ಈ ಕೃತ್ಯಕ್ಕೆ ಸಂಚು ರೂಪಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.


ಈ ಹಿನ್ನಲೆಯಲ್ಲಿ ಸೇನೆಯ ಎಲ್ಲ ಶಿಬಿರಗಳಲ್ಲಿ ಅದರಲ್ಲೂ ಜಮ್ಮು ಕಾಶ್ಮೀರದಲ್ಲಿರೋ ಸೇನಾ ಶಿಬಿರಗಳ ರೇಷನ್ ಡಿಪೋಗಳ ಮೇಲೆ ಹೆಚ್ಚಿನ ನಿಗಾ ಇಡುವಂತೆ ಹಾಗೂ ಭಾರತೀಯ ಸೈನಿಕರಿಗೆ ನೀಡಲಾಗುವ ಎಲ್ಲ ಆಹಾರಧಾನ್ಯಗಳನ್ನು ತಪಾಸನೆಗೆ ಒಳಪಡಿಸುವಂತೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ