ನಿರ್ಭಯಾ ಗ್ಯಾಂಗ್ ರೇಪಿಸ್ಟ್ ಗಳಿಗೆ ತಕ್ಷಣವೇ ಗಲ್ಲು

ಮಂಗಳವಾರ, 4 ಫೆಬ್ರವರಿ 2020 (12:30 IST)
ನವದೆಹಲಿ: ಗಲ್ಲು ಶಿಕ್ಷೆ ತಪ್ಪಿಸಲು ನೂರಾರು ನೆಪ ಹುಡುಕುತ್ತಿರುವ ನಿರ್ಭಯಾ ಗ್ಯಾಂಗ್ ರೇಪಿಸ್ಟ್ ಗಳಿಗೆ ತಕ್ಷಣವೇ ಗಲ್ಲು ಶಿಕ್ಷೆ ಜಾರಿಗೊಳಿಸಲು ರಾಜ್ಯ ಸಭೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗ್ರಹಿಸಿದ್ದಾರೆ.


 

ರಾಜ್ಯ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ನಾಲ್ವರು ಅಪರಾಧಿಗಳಿಗೆ ತಕ್ಷಣವೇ ಗಲ್ಲು ಶಿಕ್ಷೆ ಜಾರಿಯಾಗಬೇಕು ಎಂದು ಆಗ್ರಹಿಸಿದರು. ಅವರ ಈ ಆಗ್ರಹಕ್ಕೆ ರಾಜ್ಯಸಭೆ ಸಭಾಪತಿಗಳೂ ಆಗಿರುವ ವೆಂಕಯ್ಯ ನಾಯ್ಡು ಧ್ವನಿಗೂಡಿಸಿದ್ದಾರೆ.

ದೇಶದಲ್ಲಿ ಇಂತಹ ಬೆಳವಣಿಗೆಗೆ ನಾವು ಅವಕಾಶ ನೀಡಬಾರದು. ಯಾವುದೇ ಆಯ್ಕೆಗಳಿಲ್ಲದೇ ಇದ್ದರೂ ಕಾನೂನನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಈ ಅಪರಾಧಿಗಳು ಗಲ್ಲು ಶಿಕ್ಷೆ ಮುಂದೂಡುತ್ತಿದ್ದಾರೆ ಎಂದು ವೆಂಕಯ್ಯನಾಯ್ಡು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ