ಮಹಾರಾಷ್ಟ್ರದಲ್ಲಿ ಶುರುವಾಗಲಿದೆ ‘ಶಿವ ಭೋಜನ್’ ಯೋಜನೆ

ಗುರುವಾರ, 26 ಡಿಸೆಂಬರ್ 2019 (07:14 IST)
ಮುಂಬೈ : ಇತ್ತೀಚೆಗಷ್ಟೇ ರೈತರ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿದ ಮಹಾರಾಷ್ಟ್ರದ ಶಿವಸೇನೆ, ಕಾಂಗ್ರೆಸ್, ಮತ್ತು ಎನ್ ಸಿಪಿ ನೇತೃತ್ವದ ಮೈತ್ರಿ ಸರ್ಕಾರ ಇದೀಗ ಮತ್ತೊದು ಹೊಸ ಯೋಜನೆಯನ್ನು ಪ್ರಾರಂಭಿಸಲು ನಿರ್ಧಾರ ಮಾಡಿದೆ.



ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಮಹಾರಾಷ್ಟ್ರದಲ್ಲಿ ‘ಶಿವ ಭೋಜನ್’ ಎಂಬ ಹೆಸರಿನ ಕ್ಯಾಂಟೀನ್ ಆರಂಭಿಸಲು ನಿರ್ಧಾರ ಮಾಡಿದ್ದು, 10 ರೂ.ಗೆ ಊಟ ನೀಡುವ ಉದ್ದೇಶ ಈ ಯೋಜನೆಯದಾಗಿದೆ. ಈ ಊಟ ಚಪಾತಿ, ಪಲ್ಯ, ಅನ್ನ , ಸಾಂಬಾರ್ ನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ.


ಈ ಕ್ಯಾಂಟೀನ್ ನ್ನು  ಮೊದಲಿಗೆ ಬಡವರು, ನಿರ್ಗತಿಕರು, ಬಸ್, ರೈಲು ನಿಲ್ದಾಣ, ಮಾರುಕಟ್ಟೆ ಹೀಗೆ ಹೆಚ್ಚು ಜನಸಂಖ್ಯೆ ಇರುವ ಕಡೆ ನಿರ್ಮಿಸಲು ನಿರ್ಧರಿಸಿದ್ದು, ಬಳಿಕ ಇಡೀ ರಾಜ್ಯಾದ್ಯಂತ ವಿಸ್ತರಿಸುವುದಾಗಿ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ