ಸಂಜೆಯಾದರೂ ಮನೆಗೆ ಬಾರದ ತಾಯಿಯನ್ನು ಹುಡುಕಿಕೊಂಡು ಹೋದ ಮಗ ಕಂಡಿದ್ದೇನು?

ಭಾನುವಾರ, 1 ನವೆಂಬರ್ 2020 (06:50 IST)
Normal 0 false false false EN-US X-NONE X-NONE

ಕೃಷ್ಣಗಿರಿ : 62 ವರ್ಷದ ಮಹಿಳೆಯನ್ನು ಮಾನಭಂಗ ಎಸಗಿ ಆಕೆಯನ್ನು ಕೊಂದು ಚಿನ್ನಾಭರಣಗಳನ್ನು ದೋಚಿದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮತಿಗಿರಿ ಪ್ರದೇಶದಲ್ಲಿ ನಡೆದಿದೆ.
 

ಮಹಿಳೆ ತನ್ನ 42 ವರ್ಷದ ಮಗನೊಂದಿಗೆ ವಾಸವಾಗಿದ್ದಾಳೆ. ಮಗ ಕುರಿಗಳನ್ನು ಮೇಯಿಸಲು ಹೊರಗೆ ಹೋಗಿದ್ದಾನೆ. ಆ ವೇಳೆ ಮಹಿಳೆ ಮೆಟಲ್ ಸ್ಕ್ರ್ಯಾಪ್ ಸಂಗ್ರಹಿಸಲು ಸ್ಟೀಲ್ ಕಂಪೆನಿಯ ಬಳಿ ಹೋಗಿದ್ದಾಳೆ. ಮನೆಗೆ ವಾಪಾಸಾಗದ ತಾಯಿಯನ್ನು ಮಗ ಹುಡುಕಿಕೊಂಡು ಹೋದಾಗ ಆಕೆಯ ಬೆತ್ತಲೆ ದೇಹ ಪತ್ತೆಯಾಗಿದೆ. ತಕ್ಷಣ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ಶುರು ಮಾಡಿದ್ದಾರೆ. ಅಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಸೀರೆಯಿಂದ ಕತ್ತು ಹಿಸುಕಿ ಕೊಂದು ಆಕೆಯ ಬಳಿ ಇದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ