ಮಾಲೀಕಯ್ಯ ಗುತ್ತೇದಾರ್ ಕುರಿತಾಗಿ ಬಿ.ಎಸ್.ಯಡಿಯುರಪ್ಪ ನೀಡಿದ ಆಶ್ವಾಸನೆ ಏನು…?

ಶನಿವಾರ, 21 ಏಪ್ರಿಲ್ 2018 (06:23 IST)
ಕಲಬುರಗಿ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯುರಪ್ಪ ಅವರು ಮಾಲೀಕಯ್ಯ ಗುತ್ತೇದಾರ್ ಅವರ ಕುರಿತಾಗಿ ಆಶ್ವಾಸನೆವೊಂದನ್ನು ನೀಡಿದ್ದಾರೆ.


ಅಫ್ಜಲಪುರ ಪಟ್ಟಣದಲ್ಲಿ ಕ್ಷೇತ್ರದ ಜನರನ್ನುದ್ದೇಶಿಸಿ ಮಾತನಾಡಿದ ಅವರು,’ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೊದಲನೇ ಸಚಿವ ಸಂಪುಟದಲ್ಲೇ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಸಚಿವ ಸ್ಥಾನ ನೀಡುತ್ತೇನೆ. ಮಾಲೀಕಯ್ಯ ಅವರನ್ನು ಅಫ್ಜಲಪುರ ದಿಂದ ಗೆಲ್ಲಿಸಿ ಕಳಿಸಿ ನಾನು ಮಂತ್ರಿ ಮಾಡಿ ಕಳುಹಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರಿಗೆ ಸೋಲುವ ಭೀತಿ ಎದುರಾಗಿದೆ. ತಮ್ಮ ಕ್ಷೇತ್ರ ಬಿಟ್ಟು ಬಾದಾಮಿಗೆ ಪಲಾಯನಗೈಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ದುರಾಡಳಿತ ನಡೆಸಿದ ಸಿಎಂ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಿ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ