ಮೈಸೂರು ದಸರಾ ಉತ್ಸವ : ನಿಮಗೆ ತಿಳಿದ ಮತ್ತು ತಿಳಿಯದ ಸಂಗತಿಗಳು

ಶುಕ್ರವಾರ, 27 ಸೆಪ್ಟಂಬರ್ 2013 (17:29 IST)
೧. ಶ್ರೀ ರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ದುರ್ಗಾ ಮಾತೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ.
PR
PR

೨. ಲಂಕಾದುಷ್ಟ ರಾವಣನ ಮೇಲೆ ಶ್ರೀ ರಾಮನು ಯುದ್ಧ ಮಾಡಿ ಅಂತಿಮವಾಗಿ ಜಯವನ್ನು ಸಾಧಿಸುತ್ತಾನೆ. ಹೀಗಾಗಿ ದುರ್ಗಾಮಾತೆಯ ಕೃಪೆಯಿಂದಲೇ ಶ್ರೀ ರಾಮನು ಜಯ ಸಾಧಿಸಿದ್ದಾನೆ ಎಂಬುದರ ಸಂಕೇತವಾಗಿ ಉತ್ತರ ಭಾರತದಲ್ಲಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಮೈಸೂರಿನಲ್ಲಿ ಒಂಭತ್ತು ದಿನಗಳ ಕಾಲ ನವರಾತ್ರಿಯನ್ನು ಆಚರಿಸಿ ಕೊನೆಯ ದಿನ ವಿಜಯದ ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಾರೆ.

PR
PR

೩. ವಿಜಯನಗರ ಸಂಸ್ಥಾನದಲ್ಲಿಯೂ ಕೂಡ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ನಂತರದಲ್ಲಿ ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಈ ದಸರಾ ಉತ್ಸವ ಮನೆ ಮನೆಗಳಲ್ಲೂ ಪ್ರಚಲಿತವಾಯಿತು. ದಸರಾ ಹಬ್ಬದ ಸಮಯದಲ್ಲಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

PR
PR

೪. ಮೈಸೂರು ದಸರಾ ಸಮಯದಲ್ಲಿ ಅರಮನೆಯಲ್ಲಿ ಆಳೆತ್ತರದ ಗೊಂಬೆಗಳನ್ನೂ, ಅರಸರ ವಿವಿಧ ಬಗೆಯ ಸಂಗ್ರಹಗಳನ್ನೂ ಒಂದು ದೊಡ್ಡ ತೊಟ್ಟಿಯಲ್ಲಿ ಇರಿಸುತ್ತಿದ್ದರು. ಹಳೆಯ ಮೈಸೂರು ಪ್ರಾಂತ್ಯದ ಮನೆಗಳಲ್ಲಿ ಗೊಂಬೆ ಕೂರಿಸುವರು. ಹಂತ ಹಂತವಾಗಿ ಮೆಟ್ಟಿಲುಗಳನ್ನು ನಿರ್ಮಿಸಿ, ಪಟ್ಟದ ಗೊಂಬೆ ಮತ್ತು ಇತರ ಗೊಂಬೆಗಳನ್ನು ಕೂರಿಸುವರು . ಇದಕ್ಕೆಂದೇ ಮದುವೆಗಳಲ್ಲಿ ನೂತನ ದಂಪತಿಗಳಿಗೆ ತೇಗ ಅಥವಾ ಚಂದನದ ಮರದಿಂದ ಮಾಡಿದ ಪಟ್ಟದ ಗೊಂಬೆಗಳನ್ನು ನೀಡುತ್ತಾರೆ.
PR
PR

೫. ವಿಜಯದಶಮಿ ದಿನದಂದು ಲಲಿತಾದೇವಿಗೆ ಸಹಸ್ರನಾಮಯುತ ಕುಂಕುಮಾರ್ಚನೆ ಮಾಡಲಾಗುತ್ತದೆ. ಜೊತೆಗೆ ಶಮೀ ಅಥವಾ ಬನ್ನಿ ಪತ್ರವನ್ನು ಹಿರಿಯರಿಗೆ ಕೊಟ್ಟು ಕಾಲು ಮುಟ್ಟಿ ನಮಸ್ಕರಿಸುವುದು ಪದ್ಧತಿಯಾಗಿದೆ.
PR
PR

ವೆಬ್ದುನಿಯಾವನ್ನು ಓದಿ