ದರ್ಶನ್ -ಅಂಬರೀಷ್ ನಟನೆಯ ಅಂಬರೀಶ ಸೆನ್ಸಾರ್ ಕಡೆಗೆ ಪಯಣ

ಗುರುವಾರ, 6 ನವೆಂಬರ್ 2014 (13:07 IST)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಡಾ. ಅಂಬರೀಷ್ ಅವರು ಒಟ್ಟಾಗಿ ನಟಿಸಿರುವ ಚಿತ್ರ ಅಂಬರೀಶ.

ಈ ಚಿತ್ರವೂ ಈಗ ಸೆನ್ಸಾರ್ ಬಳಿ ಬಂದಿದೆ. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಹಲವು ಡೈಲಾಗ್ ಗಳು ಈಗ ಸೆನ್ಸಾರ್ ನವರ ಕಣ್ಣಿಗೆ ಬಿದ್ದು ಅದನ್ನು ಎತ್ತಿ ಹಿಡಿದಿದ್ದಾರೆ.

ಚಿತ್ರಕ್ಕೆ ಚಿಂತನ್ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರವನ್ನು ಮಹೇಶ್ ಸುಖಧರೆ ಅವರು ನಿರ್ಮಿಸಿ ನಿರ್ದೇಶಿಸಿದ್ದಾರೆ. ಸುಖಧರೆ ಚಿತ್ರಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. 
 
ಈ ಚಿತ್ರ ನವೆಂಬರ್ ತಿಂಗಳ ಎರಡನೇ ವಾರದಲ್ಲಿ ಬಿಡುಗಡೆಯ ಸಾಧ್ಯತೆ ಇದ್ದು. 250  ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

ಸುಖಧರೆ ಈಗಾಗಲೇ ಸಂಭ್ರಮ , ಸೈನಿಕ, ಸಾರ್ವಭೌಮ ಸೇರಿದಂತೆ ಹಲವಾರು ಚಿತ್ರಗಳ ನಿರ್ದೇಶನ ಮಾಡಿದ್ದಾರೆ. 
 
ಅಂಬರೀಶ ಚಿತ್ರಕ್ಕೆ ಸತ್ಯ ಕ್ಯಾಮರ, ನಾಗೇಂದ್ರ ಪ್ರಸಾದ್ ಗೀತ ರಚನೆ ಮತ್ತು ವಿ.ಹರಿಕೃಷ್ಣ ಅವರ ಸಂಗೀತ ನಿರ್ದೇಶನವಿದೆ.

ಇಷ್ವರಿ ಕುಮಾರ್ ಕಲಾ ನಿರ್ದೇಶನ, ರವಿವರ್ಮ  ಸಾಹಸ, ಮುರಳಿ, ಕಲಿ , ಗಣೇಶ್ ಕೊರಿಯಾಗ್ರಫಿ ಹೊಂದಿರುವ ಈ ಚಿತ್ರದಲ್ಲಿ ದರ್ಶನ್ ಜೊತೆ ಪ್ರಿಯಾಮಣಿ, ರಚಿತ ರಾಮ್ ಮುಂತಾದವರು ಅಭಿನಯಿಸಿದ್ದಾರೆ.  
 

ವೆಬ್ದುನಿಯಾವನ್ನು ಓದಿ