ಅರ್ಜುನ್ ಸರ್ಜಾ ಗೇಂ ಆಡಲು ಮುಹೂರ್ತ ಫಿಕ್ಸ್

ಬುಧವಾರ, 18 ಫೆಬ್ರವರಿ 2015 (10:12 IST)
ಸಾಕಷ್ಟು ವಿವಾದಿತ ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗದಲ್ಲಿ ತಮಗೊಂದು ಸ್ಥಾನ ಪಡೆದಿರುವ ನಿರ್ದೇಶಕ ಎ ಎಂ ಆರ್ ರಮೇಶ್ ಅಥವಾ ಸೈನೈಡ್ ರಮೇಶ್ ಅವರು ಅರ್ಜುನ್ ಸರ್ಜಾ ಅವರ ನಟನೆಯ ಗೇಂ  ಹೆಸರಿನ ಚಿತ್ರವನ್ನು ನಿರ್ದೇಶಿಸುವ ಬಗ್ಗೆ ನಾವು ಈ ಮೊದಲು ತಿಳಿಸಿದ್ದೆವು. ಆ ಚಿತ್ರದ ಮುಹೂರ್ತ ಇತ್ತೀಚಿಗೆ ಬೆಂಗಳೂರು ನಗರದ ಬಸವಗುದಿಯಲ್ಲಿ ಇರುವ ದೊಡ್ಡ ಗಣಪತಿ ದೇವಾಲಯದಲ್ಲಿ ಅದ್ಧೂರಿಯಿಂದ ನಡೆಯಿತು. ಆ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಅವರ ಸೋದರಳಿಯಂದಿರಾದ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಸಹ ಭಾಗವಹಿಸಿದ್ದರು. ತಮಿಳು ಹಾಗೂ ಕನ್ನಡದಲ್ಲಿ ಏಕ ಕಾಲಕ್ಕೆ ಸಿದ್ಧವಾಗುತ್ತಿರುವ ಗೇಂ ಚಿತ್ರದಲ್ಲಿ ಕನ್ನಡದ ನಟ ಆದರೆ ತಮಿಳು ಚಿತ್ರರಂಗದಲ್ಲಿ ಉತ್ತಮ ಸ್ಥಾನ ಪಡೆದ ವಿಲನ್ ಶ್ಯಾಮ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮುಹೂರ್ತದಲ್ಲಿ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸಿದ್ದರು.
ರಮೇಶ್ ನಿರ್ದೇಶನ ಅಟ್ಟಹಾಸ ಚಿತ್ರದಲ್ಲಿ ಅರ್ಜುನ್ ಅವರು ಪೊಲೀಸ್ ಅಧಿಕಾರಿ ಆಗಿದ್ದರು. ಗೇಂ ಚಿತ್ರದಲ್ಲಿ ಅವರ ಪಾತ್ರದ ಬಗ್ಗೆ ಸ್ಪಷ್ಟನೆ ಇಲ್ಲದೆ ಇದ್ದರೂ ಸಹಿತ ಅವರೇ ಮುಖ್ಯ ಪಾತ್ರಧಾರಿ ಎನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಈ ಚಿತ್ರ ಮರ್ಡರ್ ಮಿಸ್ಟ್ರಿ ಕಥೆಯನ್ನು ಹೊಂದಿದೆ. ತಾವು ಸಿನಿಮಾದ ಕಥೆಯನ್ನು ಹೇಳಲ್ಲ , ಏಕೆಂದರೆ ತಾನು ಈ ಮೊದಲು ನಿರ್ದೇಶಿಸಿದ ಕಥೆಗಳು ಅನೇಕ ರೀತಿಯಲ್ಲಿ ವಿವಾದಗಳನ್ನು ಎದುರಿಸಿತ್ತು. ಆದರೆ ಮತ್ತೆ ಇದೆ ರೀತಿಯ ವಾತಾವರಣ ಈ ಸಿನಿಮಾದಲ್ಲೂ ಸಹಿತ ಕಲ್ಪಿತವಾಗಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ. ಈ ಚಿತ್ರಕ್ಕೆ  30 ದಿನಗಳ ಕಾಲ ಶೂಟಿಂಗ್ ಇದೆ ಎಂದಿರುವ ರಮೇಶ್ ಇದನ್ನು ಜೂನ್ ಕೊನೆಯಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾರೆ.ಅಂದಂಗೆ ಈ ಚಿತ್ರ ಮಾರ್ಚ್ ತಿಂಗಳಲ್ಲಿ ಶೂಟಿಂಗ್ ಕೆಲಸ ಆರಂಭ ಮಾಡಲಿದೆ.

ವೆಬ್ದುನಿಯಾವನ್ನು ಓದಿ