ಇಂದು ರಾಟೆ, ಕೃಷ್ಣ ಲೀಲಾ ಚಿತ್ರಗಳ ಬಿಡುಗಡೆ

ಶುಕ್ರವಾರ, 20 ಮಾರ್ಚ್ 2015 (09:59 IST)
ಇಂದು ಎರಡು ಚಿತ್ರಗಳು ತೆರೆ ಕಾಣುತ್ತಿವೆ. ಒಂದು ಕೃಷ್ಣ ಲೀಲಾ ಮತ್ತೊಂದು ರಾಟೆ. ಅಜಯ್ ಕೃಷ್ಣ ರಾವ್ ಅವರ ಹೋಂ ಪ್ರೊಡಕ್ಷನ್‌ನಲ್ಲಿ ತಯಾರಾಗಿರುವ ಚಿತ್ರ ಕೃಷ್ಣ ಲೀಲಾ. ನಟನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದ ಅಜಯ್ ಎನ್ನುವ ಚಾಕೋಲೆಟ್ ಹೀರೋ ಈಗ ಕೃಷ್ಣ ಲೀಲಾ ಮೂಲಕ ನಿರ್ಮಾಪಕರಾಗಿ ಬಡ್ತಿ ಹೊಂದಿದ್ದಾರೆ. 
ಈ ಚಿತ್ರವನ್ನು ಶಶಾಂಕ್ ಅವರು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ನಟಿ ಸಿಂಧು ಲೋಕನಾಥ್ ಅತಿಥಿ ಪಾತ್ರಧಾರಿ ಆಗಿದ್ದಾಳೆ. ಹುಡುಗ ಹುಡುಗಿ ನಡುವೆ ನಡೆಯುವ ಈ ಕಥೆಯು ನೈಜ ಘಟನೆಯನ್ನು ಆಧರಿಸಿದೆಯಂತೆ. ಈ ಮಿಸ್ಡ್ ಕಾಲ್ ನಿಂದ ಆರಂಭವಾಗುವ ಕಥೆ ಇದಾಗಿದ್ದು ಆ ಬಳಿಕ ನಡೆಯುವ ರೋಚಕ ಸಂಗತಿಗಳನ್ನು ಒಳಗೊಂಡಿದೆಯಂತೆ. ಇಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆ ಆಗುತ್ತಿದೆ.
 
ರಾಟೆ ಚಿತ್ರ ಇಂದು ಎಲ್ಲರ ಮನ ಸೆಳೆಯಲು ಬರುತ್ತಿದೆ. ಎ.ಪಿ.ಅರ್ಜುನ್ ಅವರ ನಿರ್ದೇಶನದ ಚಿತ್ರ ಇದಾಗಿದ್ದು, ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಧನಂಜಯ್ ಮತ್ತು ಶ್ರುತಿ ಹರಿಹರನ್ ಅವರ ನಟನೆಯ ಈ ಚಿತ್ರ ಇಂದು ನಗರದ ನರ್ತಕಿಯಲ್ಲಿ ಬಿಡುಗಡೆಗೆ ಸ್ಥಾನ ಪಡೆದಿದೆ. 
ಸತ್ಯ ಹೆಗಡೆ ಅವರ ಛಾಯಾಗ್ರಹಣ ಇಮ್ರಾನ್ ಸರ್ದಾರಿಯ ಕೊರಿಯಾಗ್ರಫಿ ಹೊಂದಿರುವ ಈ ಚಿತ್ರ ಶಿವಾಜಿನಗರ, ಕೆ.ಆರ್.ಮಾರ್ಕೆಟ್ ಅಲ್ಲದೆ, ಕಾಡಿನಲ್ಲೂ ಸಹಿತ ಚಿತ್ರೀಕರಣ ಮಾಡಿಸಿಕೊಂಡಿದೆ. ತನ್ನನ್ನು ಪ್ರೀತಿಸುವವರಿಗಾಗಿ ಒದ್ದಾಡುವ ಹೀರೋ, ಆತ ಮಾಡುವ ಸಾಹಸ ಇಂತಹ ಹಲವಾರು ಸಂಗತಿಗಳನ್ನು ರಾಟೆ ಹೊಂದಿದೆಯಂತೆ. 

ವೆಬ್ದುನಿಯಾವನ್ನು ಓದಿ