ಆರ್ಥಿಕ ನಷ್ಟ ಸರಿದೂಗಿಸಲು ಈಗ ಎಲ್ಲರಿಗೂ ಭಾರತೀಯ ಕ್ರಿಕೆಟಿಗರೇ ಬೇಕು!

ಮಂಗಳವಾರ, 2 ಜೂನ್ 2020 (09:13 IST)
ಮುಂಬೈ: ವಿಶ್ವದ ಎಲ್ಲಾ ಕ್ರಿಕೆಟ್ ಸಂಸ್ಥೆಗಳೂ ಈಗ ಕೊರೋನಾದಿಂದಾಗಿ ಟೂರ್ನಮೆಂಟ್ ನಡೆಯದೇ ನಷ್ಟದಲ್ಲಿದೆ. ಹೀಗಾಗಿ ನಷ್ಟ ಸರಿದೂಗಿಸಲು ಈಗ ಎಲ್ಲರಿಗೂ ಭಾರತವೇ ಬೇಕು!


ಭಾರತ ಕ್ರಿಕೆಟಿಗರು ಆಡುತ್ತಾರೆಂದರೆ ವಿಶ್ವದ ಯಾವುದೇ ಮೂಲೆಯಲ್ಲಾದರೂ ಜನ ಸೇರಿಯೇ ಸೇರುತ್ತಾರೆ. ಆ ಪಂದ್ಯಕ್ಕೆ ಜನಪ್ರಿಯತೆ ಹೆಚ್ಚುತ್ತದೆ. ಸಹಜವಾಗಿಯೇ ಪ್ರಾಯೋಜಕರೂ ಹೆಚ್ಚಾಗುತ್ತಾರೆ. ಹೀಗಾಗಿ ಆದಾಯವೂ ಹೆಚ್ಚುತ್ತಾರೆ.

ಹೀಗಾಗಿ ವಿಶ್ವದ ಎಲ್ಲಾ ಕ್ರಿಕೆಟ್ ಸಂಸ್ಥೆಗಳೂ ಈಗ ಭಾರತ ತಂಡ ತಮ್ಮ ದೇಶದಲ್ಲಿ ಬಂದು ಆಡಲಿ ಎಂದು ಆಶಿಸುತ್ತಿದ್ದಾರೆ. ಆಸ್ಟ್ರೇಲಿಯಾ ಈಗಾಗಲೇ ಸರಣಿಗೆ ಸಮಯ ಫಿಕ್ಸ್ ಮಾಡಿದೆ. ದ.ಆಫ್ರಿಕಾ,  ಶ್ರೀಲಂಕಾ ಕೂಡಾ ಭಾರತ ಕ್ರಿಕೆಟ್ ತಂಡ ತಮ್ಮ ದೇಶಕ್ಕೆ ಪ್ರವಾಸ ಮಾಡುವುದನ್ನು ಎದುರು ನೋಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ