ಮನೀಶ್ ಪಾಂಡೆ ಕೈಬಿಟ್ಟ ವಿರಾಟ್ ಕೊಹ್ಲಿಗೆ ಟ್ವಿಟರಿಗರಿಂದ ತೀವ್ರ ತರಾಟೆ

ಬುಧವಾರ, 5 ಫೆಬ್ರವರಿ 2020 (09:55 IST)
ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧ ಟಿ20 ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಮೊದಲ ಏಕದಿನ ಪಂದ್ಯಕ್ಕೆ ಮನೀಶ್ ಪಾಂಡೆಯನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳದ್ದಕ್ಕೆ ಟ್ವಿಟರಿಗರು ತೀವ್ರವಾಗಿ ಟೀಕೆ ಮಾಡಿದ್ದಾರೆ.


ಇದೇನು ಅಸಂಬದ್ಧ. ಸತತವಾಗಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಕೇಧಾರ್ ಅಂಕಲ್ ಗೆ ಬೇಕಾಗಿ ಮನೀಶ್ ಪಾಂಡೆಯನ್ನು ಕೈ ಬಿಟ್ಟಿದ್ದೀರಾ? ಎಂದು ಹಲವರು ಕೊಹ್ಲಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತೆ ಕೆಲವರು ಬೌಲಿಂಗ್ ಕೂಡಾ ಮಾಡಬಲ್ಲರು ಎಂಬ ಕಾರಣಕ್ಕೆ ಮನೀಶ್ ಪಾಂಡೆಯನ್ನು ಕಡೆಗಣಿಸಿ ಕೇಧಾರ್ ಜಾಧವ್ ರನ್ನು ಆಡಿಸುತ್ತಿರಬೇಕು ಎಂದು ಮತ್ತೆ ಕೆಲವರು ಕೊಹ್ಲಿ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ