ಕಾರು ಅಪಘಾತ ಪ್ರಕರಣ; ಆರೋಪಿಗಳಿಗೆ ಸೂಕ್ತ ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ ಡಿಸಿಎಂ

ಶುಕ್ರವಾರ, 14 ಫೆಬ್ರವರಿ 2020 (11:10 IST)
ಶಿವಮೊಗ್ಗ : ಮರಿಯಮ್ಮನಹಳ್ಳಿ ಬಳಿ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ  ಆರೋಪಿಗಳಿಗೆ ಸೂಕ್ತ ಶಿಕ್ಷೆ ಕೊಡಿಸುವುದಾಗಿ ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.


ಮರಿಯಮ್ಮನಹಳ್ಳಿ ಬಳಿ ಷ ಕಾರು ಅಪಘಾತಕ್ಕೆ  ಇಬ್ಬರು ಯುವಕರು ಮೃತಪಟ್ಟಿದ್ದು, ಈ ಅಪಘಾತದ ಹಿಂದೆ ಸಚಿವ ಆರ್. ಅಶೋಕ್ ಮಗನ ಕೈವಾಡವಿದೆ ಎನ್ನಲಾಗಿದೆ. ಆದಕಾರಣ ಈ ಪ್ರಕರಣಕ್ಕೆ  ಸಂಬಂಧಿಸಿದಂತೆ ಪೊಲೀಸರ ತನಿಖೆಯ ಬಗ್ಗೆ ಮೃತ ಯುವಕನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.


ಈ ಬಗ್ಗೆ ಮಾತನಾಡಿದ ಅವರು, ವಿಐಪಿ ಕುಟುಂಬಕ್ಕೆ ಸಂಬಂಧಿಸಿದ ಪ್ರಕರಣವಾದಾಗ ಪೊಲೀಸರು ಇನ್ನಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ. ಯಾರೂ ಯಾರ ಬದುಕಿನ ಜೊತೆಯೂ ಚೆಲ್ಲಾಟವಾಡಬಾರದು. ಈ ವಿಚಾರದಲ್ಲಿ ಯಾರ ತಪ್ಪಿದೆಯೋ ಅವರಿಗೆ ಸೂಕ್ತ ಶಿಕ್ಷೆಯಾಗಲಿದೆ.  ಈ ವಿಚಾರದಲ್ಲಿ ತಾರತ್ಮ್ಯವಿಲ್ಲ . ಕಾನೂನಿನ ಎದುರು  ಎಲ್ಲರೂ ಸಮಾನರು ಎಂದು ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ