ಸಂಪುಟ ಸರ್ಕಸ್ ಅಂತ್ಯ : ಬಿಜೆಪಿಯಲ್ಲಿ ಹೊಸ ಬೆಳವಣಿಗೆ ಶುರು

ಗುರುವಾರ, 6 ಫೆಬ್ರವರಿ 2020 (15:35 IST)

ಅಳೆದೂ ತೂಗಿ ಕೊನೆಗೂ ರಾಜ್ಯ ಸರಕಾರದ ಸಚಿವ ಸಂಪುಟವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೈಕಮಾಂಡ್ ನಿರ್ದೇಶನದಂತೆ ವಿಸ್ತರಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಮೂಲ ಬಿಜೆಪಿಗರು ಮುನಿಸಿಕೊಂಡಿದ್ದಾರೆ.
 

ಮೂಲ ಬಿಜೆಪಿಗರಿಗೆ ಎರಡನೇ ಬಾರಿ ನಡೆದ ಸಚಿವ ಸಂಪುಟದಲ್ಲೂ ಸ್ಥಾನ ಕೊಡದಿರೋದು ಭಾರೀ ಪ್ರಮಾಣದಲ್ಲಿ ಬೇಸರ ತರಿಸಿದೆ. ಹೀಗಾಗಿ ಇವರ ರಾಜಕೀಯ ನಡೆ ಕುತೂಹಲ ಮೂಡಿಸಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪರ ನಿವಾಸಕ್ಕೆ ಇವತ್ತು ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದ ಮೂಲ ಬಿಜೆಪಿಗರಲ್ಲಿ ಯಾರೊಬ್ಬರೂ ಭೇಟಿ ನೀಡಿಲ್ಲ.

ಹೀಗಾಗಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದ್ದು, ಇದನ್ನು ಸಿಎಂ ಯಾವ ರೀತಿ ಪರಿಹರಿಸುತ್ತಾರೆ ಅನ್ನೋದೇ ಸಧ್ಯದ ಕುತೂಹಲ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ