ಅಭ್ಯರ್ಥಿಗಳ ಬಗ್ಗೆ ಸರ್ವೇ ಮಾಡಬೇಕಿದೆ, ಹೋಗ್ತಿದ್ದೇವೆ-ಡಿಕೆಶಿ

ಶನಿವಾರ, 30 ಡಿಸೆಂಬರ್ 2023 (14:01 IST)
ದೆಹಲಿಯಲ್ಲಿ ಮೀಟಿಂಗ್ ವಿಚಾರವಾಗಿ ನಗರದಲ್ಲಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ನಾಲ್ಕನೇ ತಾರೀಖು ಸಿಎಂ, ನಾನು ದೆಹಲಿಗೆ ಹೋಗ್ತಿದ್ದೇವೆ.ಪಾರ್ಟಿ ಮೀಟಿಂಗ್ ಇದೆ, ಚರ್ಚೆ ಮಾಡೋದು ಇದೆ.ನಮ್ಮೆಲ್ಲಾ ಮಂತ್ರಿಗಳು ರಿಪೋರ್ಟ್ ಕೊಟ್ಟಿದ್ದಾರೆ.ಅಭ್ಯರ್ಥಿಗಳ ಬಗ್ಗೆ ಸರ್ವೇ ಮಾಡಬೇಕಿದೆ, ಹೋಗ್ತಿದ್ದೇವೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.
 
ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ಸಾವಿರ ಕೋಟಿ ಅನುದಾನ ಘೋಷಣೆ ವಿಚಾರವಾಗಿ ರಾಮನಗರಕ್ಕೆ ಬಂದು ನೋಡಿ, ಕರೆದುಕೊಂಡು ಹೋಗ್ತೀನಿ.ಬೇರೆಯವರಿಗೂ ನಮಗೂ ವ್ಯತ್ಯಾಸ ಇದೆ.ಅವ್ರು ನಗರದಲ್ಲಿ ಇರ್ತಾರೆ, ನಮಗೆ ನರೇಗಾ ಬರುತ್ತೆ.ಆ ಜನರ ಬದುಕು ಬದಲಾವಣೆ ಮಾಡಬೇಕು.ಸಿಎಂ ಒಳ್ಳೆಯ ನಿರ್ಧಾರ ಮಾಡಿದ್ದಾರೆ.ಬಿಜೆಪಿಯವರು ಮಾತಾಡ್ತಾ ಇರಲಿ, ನಮ್ಮ‌ ಕೆಲಸ ನಾವು ಮಾಡ್ತೀವಿ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ