ಮೈಸೂರಿನಲ್ಲಿ ಪ್ರಜ್ಞಾವಂತ ಮತದಾರರ ಬೆಂಬಲ ತಮಗಿದೆ: ಪ್ರತಾಪ್ ಸಿಂಹ

ಶುಕ್ರವಾರ, 14 ಮಾರ್ಚ್ 2014 (17:54 IST)
PR
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತ ಪ್ರತಾಪ್ ಸಿಂಹ ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್, ಜೋಷಿ ಮುಂತಾದ ಮುಖಂಡರು ಪಾಲ್ಗೊಂಡಿದ್ದರು.ಪ್ರತಾಪ್ ಸಿಂಹ ಅವರಿಗೆ ಮೈಸೂರು ಲೋಕಸಭೆ ಸ್ಥಾನದ ಟಿಕೆಟ್ ನೀಡಿರುವುದಕ್ಕ ಸ್ಥಳೀಯ ಕಾರ್ಯಕರ್ತರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಅವರು ಮೈಸೂರಿನಲ್ಲಿ ನನಗೆ ಪ್ರಜ್ಞಾವಂತ ಮತದಾರರ ಬೆಂಬಲ ಜಾಸ್ತಿ ಇದೆ. ಅಂತಹ ಜನರನ್ನು ಮುಟ್ಟುವುದು ಸುಲಭವೆಂದು ತಮಗೆ ಅನಿಸಿತು.

ರಾಜಕೀಯ ಪ್ರವೇಶಕ್ಕೆ ಹೊರಟವನಿಗೆ ಕ್ಷೇತ್ರ ಯಾವುದಾದರೇನು ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ನನ್ನ ಯೋಗ್ಯತೆಯನ್ನು ನೋಡಿ, ಜನರಲ್ಲಿ ತಾವು ಗಳಿಸಿರುವ ವಿಶ್ವಾಸ ನೋಡಿ ನನ್ನನ್ನು ಅಭ್ಯರ್ಥಿಯಾಗಿ ಮಾಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ