ಶಾರುಖ್ ಖಾನ್ ಲತಾ ದೀದಿ ಪಾರ್ಥಿವ ಶರೀರಕ್ಕೆ ಉಗುಳಿದ್ದರಾ? ಮುಸ್ಲಿಂ ಸಂಪ್ರದಾಯವೇನು ಗೊತ್ತಾ?

ಮಂಗಳವಾರ, 8 ಫೆಬ್ರವರಿ 2022 (08:40 IST)
ಮುಂಬೈ: ದಿವಂಗತ ಗಾಯಕಿ ಲತಾ ಮಂಗೇಶ್ಕರ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸುವಾಗ ನಟ ಶಾರುಖ್ ಖಾನ್ ಪ್ರಾರ್ಥನೆ ಮಾಡಿ ಕೊನೆಗೆ ಮಾಸ್ಕ್ ತೆಗೆದು ಉಗುಳಿದರು ಎಂದು ವಿವಾದವಾಗಿತ್ತು. ಅಸಲಿಗೆ ಶಾರುಖ್ ಮಾಡಿದ ಈ ಪದ್ಧತಿಯೇನು ಗೊತ್ತಾ?

ಭಾರತ ರತ್ನ ಲತಾ ಮೃತದೇಹಕ್ಕೆ ಉಗುಳಿದ್ದಾರೆಂದು ಶಾರುಖ್ ಮೇಲೆ ಹಲವರು ಕಿಡಿಯಾಗಿದ್ದಾರೆ. ಇದು ಮುಸ್ಲಿಂ ಧರ್ಮದ ಆಚರಣೆಯೊಂದಾಗಿದೆ.

ಮುಸ್ಲಿಂ ಧರ್ಮದ ಪ್ರಕಾರ ಲತಾ ದೀದಿ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ನಡೆಸಿದ ಶಾರುಖ್ ಬಳಿಕ ಮಾಸ್ಕ್ ತೆಗೆದು ಬಾಯಲ್ಲಿ ಗಾಳಿ ಹೊರಹಾಕುತ್ತಾರೆ. ಇದು ಮುಸ್ಲಿಂ ಧರ್ಮದ ಪ್ರಕಾರ ದುವಾ ಅಥವಾ ಶಾಂತಿ ಕೋರಿ ಪಾರ್ಥಿವ ಶರೀರವನ್ನು ಬೀಳ್ಕೊಡುವ ಸಂಪ್ರದಾಯ. ಆದರೆ ಈ ರೀತಿ ಮಾಡಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ