ತಮಿಳು ನಟ ಶ್ರೀಕಾಂತ್ ಅವರು ‘ದಿ ವಿಲನ್ ‘ ಚಿತ್ರತಂಡದಿಂದ ಹೊರಬಂದಿದ್ದೇಕೆ?

ಮಂಗಳವಾರ, 13 ಮಾರ್ಚ್ 2018 (07:13 IST)
ಬೆಂಗಳೂರು : ಸಿನಿಮಾ ರಸಿಕರು ಬಹು ನಿರೀಕ್ಷೆಯಿಂದ ಕಾಯುತ್ತಿರುವ ‘ದಿ ವಿಲನ್ ‘ ಚಿತ್ರದ ಚಿತ್ರಿಕರಣ ಕೊನೆಯ ಹಂತ ತಲುಪಿದ್ದು, ಇದೀಗ ಈ ಚಿತ್ರದಲ್ಲಿ ಅಭಿನಯಿಸಲಿರುವ ತಮಿಳು ನಟ ಶ್ರೀಕಾಂತ್ ಅವರು ಚಿತ್ರತಂಡದಿಂದ ಹೊರಬಂದಿದ್ದಾರೆ.


ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರು ಜೊತೆಯಾಗಿ ನಟಿಸಿದ ಈ ಚಿತ್ರದಲ್ಲಿ ತಮಿಳು ನಟ ಶ್ರೀಕಾಂತ್ ಅವರು ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ಈಗ ಅವರು ಚಿತ್ರತಂಡದಿಂದ ಹೊರನಡೆದಿದ್ದಾರೆ. ಅಂದ ಹಾಗೇ ಇವರು ಚಿತ್ರವನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದಲ್ಲ ಬದಲಾಗಿ ಅವರ ಪಾತ್ರದ ಚಿತ್ರಿಕರಣವನ್ನು ಪೂರ್ಣಗೊಳಿಸಿ ಹೊರಹೋಗಿದ್ದಾರೆ.


ಈ ಬಗ್ಗೆ ನಿರ್ದೇಶಕ ಪ್ರೇಮ್ ಅವರು ತಮ್ಮ ಫೆಸ್ ಬುಕ್ ನಲ್ಲಿ ‘ಇಂದು ನಿಮ್ಮ ಜೊತೆ ಕೊನೆಯ ದಿನದ ಚಿತ್ರೀಕರಣ, ಧನ್ಯವಾದಗಳು ಸರ್, ನಿಮ್ಮ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಚಿತ್ರತಂಡದ ಪ್ರತಿಯೊಬ್ಬರಿಗೂ ನೀವು ಸ್ಫೂರ್ತಿ’ ಎಂದು ಬರೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ