ಜನರೇ ನನ್ನ ಆಸ್ತಿ : ಅಂಬರೀಷ್ ಹೇಳಿಕೆಗೆ ಪುಳುಕಿತರಾದ ಅಭಿಮಾನಿಗಳು

PR
PR
ಬೆಂಗಳೂರು: ಸಿಂಗಪುರದಲ್ಲಿ ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಅಂಬರೀಷ್ ಮಲೇಷ್ಯಾದಿಂದ ಇಂದು ಬೆಂಗಳೂರಿಗೆ ಆಗಮಿಸಿದ್ದು, ಜೆಪಿನಗರದ ಅವರ ನಿವಾಸದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ತಮ್ಮ ನಿವಾಸಕ್ಕೆ ಆಗಮಿಸಿದ ಅಂಬರೀಷ್‌ ಅವರಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು. ಅಂಬಿ ನಿವಾಸದಲ್ಲಿ ಹಬ್ಬದ ಸಡಗರ ತುಂಬಿದ್ದು, ನಿವಾಸದ ಎದುರು ಅಭಿಮಾನಿಗಳ ದಂಡು ತುಂಬಿಕೊಂಡಿದೆ. ಒಂದು ಕಡೆ ಅವರ ಕುಟುಂಬ ವರ್ಗ ಸಂಭ್ರಮದಿಂದ ಕೂಡಿದ್ದರೆ ಇನ್ನೊಂದು ಕಡೆ ಅವರ ಅಭಿಮಾನಿಗಳು ಅಂಬಿ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿದರು.

ಅಂಬಿ ಮನೆ ಎದುರು ಬಣ್ಣ ಬಣ್ಣದ ರಂಗೋಲಿ ಹಾಕಲಾಗಿತ್ತು. ಅಭಿಮಾನಿಗಳನ್ನು ಕಂಡು ಅಂಬರೀಷ್ ಭಾವುಕರಾಗಿ ಮಾತನಾಡಿದರು. ಜಾತಿ, ಧರ್ಮ ಮೀರಿ ನನ್ನನ್ನು ಹಾರೈಸಿದ್ದೀರಿ. ನಿಮ್ಮ ಸ್ವಾಗತಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ಜನರೇ ನನ್ನ ಆಸ್ತಿ, ನಿಮ್ಮನ್ನು ನೋಡುವ ಭಾಗ್ಯ ನನಗೆ ದೊರೆತಿದೆ ಎಂದು ಅಂಬರೀಷ್ ಹೇಳಿದಾಗ ಅಭಿಮಾನಿಗಳು ಪುಳಕಿತರಾಗಿ ಜೈಕಾರ ಕೂಗಿದರು.

ವೆಬ್ದುನಿಯಾವನ್ನು ಓದಿ