ಇಂದು ಗಣೇಶನ ಸ್ಥಾಪನೆ ಮಾಡಲಾಗುವುದು. ಗಣೇಶನ ವಿಸರ್ಜನೆ ಸೋಮವಾರ, 8 ಸೆಪ್ಟೆಂಬರ್ವರೆಗೆ ನಡೆಯಲಿದೆ. ಈ ರೀತಿಯಾಗಿ 11 ದಿನಗಳವರೆಗೆ ಗಣೇಶೋತ್ಸವ ನಡೆಯುತ್ತದೆ. ಗಣೇಶನ ಸ್ಥಾಪನೆ ಶುಭ ಮುಹೂರ್ತದಲ್ಲಿಯೇ ಮಾಡಬೇಕು. ದೇವತೆಗಳ ದೇವ ಭಗವಾನ್ ಗಣೇಶ ಎಲ್ಲಾ ಶುಭ ಕಾರ್ಯಗಳಲ್ಲಿ ಪ್ರಥಮ ಪೂಜಿತನಾಗುತ್ತಾನೆ. ಈ ಬಾರಿ ಗಣೇಶನ ಸ್ಥಾಪನೆ ಶುಕ್ರವಾರ ಆಗಲಿದೆ. ಈ ದಿನ ಹಸ್ತ ನಕ್ಷತ್ರ, ಶುಭ ಯೋಗ ಮತ್ತು ಕರಣ ವಣಿಜ ಇರುವುದರಿಂದ ಈ ಅತ್ಯಂತ ಶುಭವಾಗಿದೆ.
ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯ ದಿನದಂದು ಮಾತೆ ಪಾರ್ವತಿಯ ಮೈಮೇಲಿನ ಸುಗಂಧ ದ್ರವ್ಯಗಳಿಂದ ಭಗವಾನ ಗಣೇಶನ ಸೃಷ್ಟಿಯಾಯಿತು. ಮಧ್ಯಾನ ಗಣೇಶನ ಜನವಾಗಿದ್ದರಿಂದ ಗಣೇಶನ ಸ್ಥಾಪನೆ ಶುಭ, ಲಾಭ, ಅಮೃತಲ್ಲಿ ಮಧ್ಯಾನ ಸ್ಥಾಪನೆ ಮಾಡಲಾಗುತ್ತದೆ.
ಪೂಜೆ ಮಾಡುವ ವಿಧಾನ: ಸ್ನಾನವನ್ನು ಮಾಡಿ ' ಮಮ್ ಸರ್ವಕರ್ಮಸಿದ್ದಿಯೆ ಸಿದ್ದಿವಿನಾಯಕಪೂಜನಮಃ ಕರಿಷ್ಯೆ'ಯ ಸಂಕಲ್ಪ ಮಾಡಿ, ಸ್ವಸ್ತಿಕ ಮಂಡಲದಲ್ಲಿ ಪ್ರತ್ಯಕ್ಷ ಅಥವಾ ಸ್ವರ್ಣಾದಿ ನಿರ್ಮಿತ ಮೂರ್ತಿ ಸ್ಥಾಪನೆ ಮಾಡಿ ವಿಧಿವಿಧಾನಗಳಿಂದ ಪೂಜೆ ಮಾಡಿ ಮತ್ತು 12 ಹೆಸರಿನ ಪೂಜೆ ಮತ್ತು 21 ಗರಿಕೆ ಹುಲ್ಲಿನ ಪೂಜೆ ಮಾಡಿ ಧೂಪ ದೀಪದಿಂದ ಉಳಿದ ಪೂಜೆ ಮುಕ್ತಾಯಗೊಳಿಸಿ