ಯಾವುದೇ ಕಾರಣಕ್ಕೂ ಡ್ರಾಗನ ನನ್ನು ನಿಮ್ಮ ಮಲಗುವ ಕೋಣೆಯಲ್ಲಿ ಇಡಬೇಡಿ.ಅಳುವ ಹಾಗೂ ಮುಖ ಸುಕ್ಕುಗಟ್ಟಿದ ವ್ಯಕ್ತಿಯ ಭಾವಚಿತ್ರವನ್ನು ಮನೆಯಲ್ಲಿ ಇಡಬೇಡಿ.ದೂರವಾಣಿಯ ಮೇಲೆ ಸ್ಪಟಿಕ ಚೆಂಡು ಇಡುವುದರಿಂದ ಶುಭವಾರ್ತೆ ಕೇಳಬಹುದು.ಹೂತೋಟದ ಆಗ್ನೇಯ ವಲಯದಲ್ಲಿ ಕಿತ್ತಳೆ ಗಿಡವನ್ನು ಬೆಳೆಸುವುದರಿಂದ ಮನೆಯಲ್ಲಿ ಸಿರಿ ಸಂಪತ್ತು ಹೆಚ್ಚುವದು.ಮೆಟ್ಟಿಲುಗಳ ಕೆಳಗೆ ನೀರು ಮತ್ತು ಮೂಲಧಾತು ಇಡಬೇಡಿರಿ.
ಮುಖದ್ವಾರದ ಎದುರು ಗಡಿಯಾರ ಹಾಕುವುದು ಅಶುಭ ಲಕ್ಷಣ.4, 5, 23, ಸಂಖ್ಯೆಗಳನ್ನು ಅಶುಭ ಸಂಖ್ಯೆ ಎಂದು ಪರಿಗಣಿಸಲಾಗಿದೆ.ಆಮೆ ಧೀರ್ಘಾಯುಷ್ಯದ ಸಂಕೇತವಾಗಿದೆ.ಮನೆಯ ಪ್ರತಿಯೊಂದು ಭಾಗದಲ್ಲಿ 5 ಮೂಲಧಾತುಗಳ ಸಮತೋಲನ ಕಾಪಾಡಿಕೊಂಡರೆ ಶಾಂತಿ ನೆಲಸುವುದು.