ಅರವಿಂದ ಕೇಜ್ರಿವಾಲ್ ಮನವಿಯ ನಂತರ ಆಪ್ ಪಕ್ಷಕ್ಕೆ ಕಳೆದ ಎರಡು ದಿನಗಳಲ್ಲಿ ಒಂದು ಕೋಟಿಗಿಂತ ಹೆಚ್ಚು ಚಂದಾ ಸಿಕ್ಕಿದೆ.
PTI
ಕಳೆದ ಎರಡು ದಿನಗಳಲ್ಲಿ ದೇಣಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ ಬುಧವಾರ 80 ಲಕ್ಷ ರೂಪಾಯಿ ಸಂಗ್ರಹವಾಗಿತ್ತು ಮತ್ತು ಗುರುವಾರ 35 ಲಕ್ಷ ಹಣ ಸಂಗ್ರಹವಾಗಿದೆ ಎಂದು ಆಪ್ನ ನಾಯಕರೊಬ್ಬರು ತಿಳಿಸಿದ್ದಾರೆ.
ಈ ದೇಣಿಗೆಯಲ್ಲಿ ಭಾರತದಷ್ಟೇ ಅಲ್ಲ, ವಿದೇಶದ ಪಾಲು ಕೂಡ ಇದೆ. ಅಮೇರಿಕಾ, ಬೆಲ್ಜಿಯ್ಂ, ಓಮಾನ್, ಕೆನಡಾ, ಜಪಾನ್, ಜರ್ಮನಿ, ಆಸ್ಟ್ರೇಲಿಯಾದಲ್ಲಿ ಪಕ್ಷದ ಬೆಂಬಲಿಗರು ದೇಣಿಗೆಯನ್ನು ಕಳುಹಿಸಿ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಒಬ್ಬರು ಒಂದು ಲಕ್ಷ ರೂಪಾಯಿಗಳನ್ನು ದಾನವಾಗಿ ಕೊಟ್ಟಿದ್ದಾರೆ. ಅಲ್ಲೇ ಕನಿಷ್ಠ 10 ರೂಪಾಯಿ ಚಂದಾ ಕೂಡ ಸಿಕ್ಕಿದೆ.
ಎರಡು ದಿನಗಳ ಮೊದಲು ಆಪ್ ನಾಯಕ ಕೇಜ್ರಿವಾಲ್ ಜನರಲ್ಲಿ ಸಹಾಯ ಧನ ನೀಡಿ ಎಂದು ಮನವಿ ಮಾಡಿ ಟ್ವೀಟ್ ಮಾಡಿದ್ದರು. ವಾರಣಾಸಿಯಿಂದ ಮೋದಿ ಎದುರಾಗಿ ಕಣಕ್ಕಿಳಿದಿರುವ ಕೇಜ್ರಿವಾಲ್ ತಂಡ ಕೆಲವು ದಿನಗಳ ಹಿಂದೆ ಲಾಪಟಾಪ್ಗಾಗಿ ಮನವಿ ಸಲ್ಲಿಸಿತ್ತು.