ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಸೇರಿದ ನೊಯ್ಡಾದ ಅಭ್ಯರ್ಥಿ ರಮೇಶ ತೋಮರ್

ಗುರುವಾರ, 3 ಏಪ್ರಿಲ್ 2014 (12:46 IST)
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ದಿನಗಳಲ್ಲಿ ಗೌತಮ ಬುದ್ಧ ನಗರ(ನೊಯ್ಡಾ)ದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದಿದ್ದ ಅಭ್ಯರ್ಥಿ ರಮೇಶ ತೋಮರ್ ಪಕ್ಷವನ್ನು ತ್ಯಜಿಸಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುವುದರ ಮೂಲಕ ಕಾಂಗ್ರೆಸ್‌ಗೆ ಬಲವಾದ ಆಘಾತವನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
PTI

ನಾಲ್ಕು ಸಲ ಕಾಂಗ್ರೆಸ್ಸಿಂದ ಸಂಸದರಾಗಿ ಆಯ್ಕೆಯಾಗಿದ್ದ ತೋಮರ ಪಕ್ಷ ತ್ಯಜಿಸಿದ್ದು, ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಮೂಲಕ ಕಾಂಗ್ರೆಸ್ ಸುಲಭವಾಗಿ ಗೆಲ್ಲಲಿದ್ದ ಸ್ಥಾನವನ್ನು ಕಳೆದು ಕೊಂಡಂತಾಗಿದೆ. ಉಲ್ಲೇಖನೀಯ ವಿಷಯವೇನೆಂದರೆ ನೊಯ್ಡಾದಲ್ಲಿ ನಾಮಪತ್ರವನ್ನು ವಾಪಸ್ ಪಡೆಯುವ ಕೊನೆಯ ದಿನವೂ ಕೂಡ ಮುಗಿದು ಹೋಗಿದೆ.

ಈ ಕ್ಷೇತ್ರದಿಂದ ಬಿಜೆಪಿಯ ಮಹೇಶ ಶರ್ಮಾ, ಆಪ್‌ನ ಕೆ.ಪಿ. ಸಿಂಹ್, ಬಿಎಸ್‌ಪಿಯ ಸುರೇಂದ್ರ ನಾಗರ್ ಮತ್ತು ಸಮಾಜವಾದಿ ಪಕ್ಷದಿಂದ ನರೇಂದ್ರ ಭಾಟಿ ಕಣಕ್ಕಿಳಿಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ