ಕೋಮುವಾದಿ ಶಕ್ತಿಗಳೊಂದಿಗೆ ಹೊಂದಾಣಿಕೆಯಿಲ್ಲ: ನಿತೀಶ್ ಕುಮಾರ್

ಸೋಮವಾರ, 3 ಫೆಬ್ರವರಿ 2014 (13:12 IST)
PTI
ಕೋಮುವಾದಿ ಶಕ್ತಿಗಳೊಂದಿಗೆ ಯಾವತ್ತೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುಡುಗಿದ್ದಾರೆ.

ಬಿಹಾರ್ ರಾಜ್ಯದ ಜನತೆ ಜಾತಿ ಮತವನ್ನು ಮರೆತು ನನಗೆ ಸರಕಾರ ನಡೆಸಲು ಬಹುಮತ ನೀಡಿದ್ದಾರೆ. ಜನತೆಯ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಾರೆ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮತಯಾಚಿಸುವ ಪಕ್ಷಗಳನ್ನು ಜನತೆ ಹೀನಾಯವಾಗಿ ಸೋಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೆಡಿಯು ಪಕ್ಷದ ಸಂಕಲ್ಪ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕೋಮವಾದಿ ಪಕ್ಷಗಳು ಮತ್ತು ಸುಳ್ಳು ವರದಿಗಳನ್ನು ಹರಡಿಸುತ್ತಿರುವ ಆರ್‌ಜೆಡಿ ಪಕ್ಷ ಹಗಲು ಗನಸು ಕಾಣುತ್ತಿವೆ. ಇಂತಹ ವಿಚ್ಚಿದ್ರಕಾರಿ ಶಕ್ತಿಗಳ ವಿರುದ್ಧ ಜನತೆ ಎಚ್ಚರವಿರಬೇಕು ಎಂದು ಕರೆ ನೀಡಿದರು.

ಹಣದುಬ್ಬರ ಮತ್ತು ಭ್ರಷ್ಟಾಚಾರದ ಆರೋಪಗಳಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಸ್ಪಷ್ಟವಾಗಿ ಕಾಣುತ್ತಿದೆ. ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ ಬಿಜೆಪಿ ಕೂಡಾ ಅಧೋಗತಿಗೆ ಇಳಿದಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಲೇವಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ