ತಮ್ಮ ತಲೆ ಕೂದಲನ್ನು ರಕ್ಷಿಸಿಕೊಳ್ಳಲಾಗದ ಅಮಿತ್ ಸೇಡನ್ನು ಹೇಗೆ ತೀರಿಸಿಕೊಳ್ಳಬಲ್ಲರು: ಅಜಮ್ ಖಾನ್

ಶುಕ್ರವಾರ, 11 ಏಪ್ರಿಲ್ 2014 (11:27 IST)
ಸದಾ ತನ್ನ ರಾಜಕೀಯ ಎದುರಾಳಿಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕ ಸುದ್ದಿಯಲ್ಲಿರುವ ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ ಅಜಂ ಖಾನ್, ಮತ್ತೊಮ್ಮೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಆಪ್ತ ಸಹಾಯಕ ಅಮಿತ್ ಷಾ ಮೇಲೆ ಮತ್ತೊಮ್ಮೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಾರೆ.
PTI

ಉತ್ತರಪ್ರದೇಶದಲ್ಲಿ ಬಿಜೆಪಿ ಉಸ್ತುವಾರಿ ತೆಗೆದುಕೊಂಡಿರುವ ಷಾ ಮೇಲೆ ಮಾತಿನಾಸ್ತ್ರ ಪ್ರಯೋಗಿಸಿದ ಖಾನ್ "ಷಾರವರಿಗೆ ತನ್ನ ತಲೆಯ ಮೇಲಿನ ಕೂದಲನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ, ಮತ್ತೆ ಹೇಗೆ ತಾನೇ ಅವರು ಸೇಡನ್ನು ತೀರಿಸಿಕೊಳ್ಳಬಲ್ಲರು" ಎಂದು ಟೀಕಿಸಿದ್ದಾರೆ.

ಇತ್ತೀಚಿಗೆ ಷಾ ಮುಝಪ್ಫರ್‌ನಗರದ ಮತದಾರರಲ್ಲಿ "ಸೇಡಿಗಾಗಿ ಮತ" ನೀಡಿ ಎಂದು ಕರೆ ಕೊಟ್ಟಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಖಾನ್ ಈ ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಮಾಧ್ಯಮಗಳು ಬಗ್ಗೆ ಕಿಡಿಕಾರಿದ ಎಸ್ಪಿ ನಾಯಕ , ಅವೆಲ್ಲವೂ ಮೋದಿಗೆ ಮಾರಾಟವಾಗಿವೆ ಎಂದು ಹೇಳಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ಜಯ ಸಾಧಿಸಿದ್ದು ಹಿಂದು ಸೈನಿಕರಲ್ಲ, ಮುಸ್ಲಿಮರು ಎಂದು ಹೇಳುವುದರ ಖಾನ್ ಇತ್ತೀಚೆಗೆ ವಿವಾದವನ್ನು ಸೃಷ್ಟಿಸಿದ್ದರು.

ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮಾಜಿ ಸೇನಾ ಮುಖ್ಯಸ್ಥ ಮತ್ತು ಘಾಜಿಯಾಬಾದ್‌ನಿಂದ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ವಿ.ಕೆ. ಸಿಂಗ್ ಭಾರತ ಕಾರ್ಗಿಲ್ ಯುದ್ಧವನ್ನು ಜಯಿಸಿದ್ದು ಭಾರತೀಯರು ಎಂದು ಎಂದು ಹೇಳಿದ್ದರು.

ಹೈ ವೋಲ್ಟೇಜ್ ಚುನಾವಣಾ ಪ್ರಚಾರದಲ್ಲಿ ಪರಸ್ಪರ ವಿವಾದಾತ್ಮಕ ಆರೋಪಗಳನ್ನು ಮಾಡುತ್ತಿರುವ ರಾಜಕಾರಣಿಗಳ ಕೆಸೆರೆರೆಚಾಟ ಭರದಿಂದ ಸಾಗಿದೆ.

ವೆಬ್ದುನಿಯಾವನ್ನು ಓದಿ