ಬಿಜೆಪಿ ನಾಯಕ ಅನಂತಕುಮಾರ್ ಬಂಡವಾಳ ಬಯಲಾಗಿದೆ. ಭಾರತ ಮಾತೆಗೆ ದ್ರೋಹ ಬಗೆದಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮುತಾಲಿಕ್ ನಾಮಪತ್ರ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿ ನಂತರ ಪಕ್ಷದಿಂದ ಹೊರದೂಡುವಲ್ಲಿ ಅನಂತ್ ಪಾತ್ರವಿದೆ ಎಂದು ಕಿಡಿಕಾರಿದರು.