ನರೇಂದ್ರ ಮೋದಿ ತಾವು ದೇವರಿಗಿಂತ ಹೆಚ್ಚು ಎಂದು ಭಾವಿಸಿದ್ದಾರೆ: ಕಾಂಗ್ರೆಸ್

ಶನಿವಾರ, 29 ಮಾರ್ಚ್ 2014 (12:44 IST)
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತಮ್ಮನ್ನು ತಾವು ದೇವರಿಗಿಂತ ಮಿಗಿಲು ಎಂದು ಭಾವಿಸಿದ್ದಾರೆ. ಇಂತಹ ವ್ಯಕ್ತಿಯನ್ನು ಆಗಸದಿಂದ ಭೂಮಿಗೆ ಬೀಳುವ ದಿನಗಳು ದೂರವಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಎಐಸಿಸಿ ವಕ್ತಾರ ರಣದೀಪ್ ಸುರ್ಜೆವಾಲಾ ಸುದ್ದಿಗಾರರೊಂದಿಗೆ ಮಾತನಾಡಿ, ದುರದೃಷ್ಠಕರವಾಗಿ ಮೋದಿ ತಾವು ದೇವರಿಗಿಂತ ಹೆಚ್ಚು ಎಂದು ಭಾವಿಸುತ್ತಿದ್ದಾರೆ. ಯಾವಾಗ ಅವರು ದೇವರಿಗಿಂತ ಹೆಚ್ಚು ಎಂದು ಭಾವಿಸಿದ್ದಾರೆಯೋ ಅಂತಹ ವ್ಯಕ್ತಿಗಳಿಗೆ ದೇವರು ಮತ್ತು ನಿಸರ್ಗ ತಕ್ಕ ಪಾಠ ಕಲಿಸುತ್ತದೆ ಎಂದು ಹೇಳಿದ್ದಾರೆ.

ಕೆಲ ವ್ಯಕ್ತಿಗಳ ಇಂತಹ ಭಾವನಗಳು ವರ್ತನೆಗಳಿಂದಾಗಿ ಭಾರತೀಯ ಸಂಪ್ರದಾಯ ಹದಗೆಡುತ್ತಿದೆ. ಗುಜರಾತ್ ಗಲಭೆಯ ರೂವಾರಿಯಾದ ಮೋದಿಗೆ ದೇಶದ ಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೌತ್ ಕಾ ಸೌದಾಗರ್ ಎಂದು ಕಾಂಗ್ರೆಸ್ ಹೇಳಿಕೆ ನೀಡಿದ್ದರಲ್ಲಿ ತಪ್ಪಿಲ್ಲ. ಗುಜರಾತ್ ಗಲಭೆಯ ಹೊಣೆಯನ್ನು ಮೋದಿ ತಪ್ಪಿಸಿಕೊಳ್ಳುವಂತಿಲ್ಲ ಎಂದು ಎಐಸಿಸಿ ವಕ್ತಾರ ರಣದೀಪ್ ಸುರ್ಜೆವಾಲಾ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ