ಬಿಜೆಪಿ ಬಂಡವಾಳ ಬಯಲು ಮಾಡ್ತೇನೆ: ಜಸ್ವಂತ್ ಸಿಂಗ್ ಬೆದರಿಕೆ
ಶನಿವಾರ, 22 ಮಾರ್ಚ್ 2014 (15:36 IST)
PTI
ರಾಜಸ್ಥಾನದ ಬಾರ್ಮರ್ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತರಾದ ಹಿರಿಯ ನಾಯಕ ಜಸ್ವಂತ್ ಸಿಂಗ್, ಬಿಜೆಪಿ ಬಂಡವಾಳ ಬಯಲು ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್ ತವರು ಕ್ಷೇತ್ರವಾದ ಬಾರ್ಮರ್ನಿಂದ ಸ್ಪರ್ಧಿಸುವ ಆಕಾಂಕ್ಷೆಯನ್ನು ಹೊಂದಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿರುವುದು ಅಸಮಾಧಾನ ಮೂಡಿಸಿದೆ. ನಾಳೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಜಸ್ವಂತ್ ಸಿಂಗ್ ಅವರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ ಹೈಕಮಾಂಡ್, ಮುಖ್ಯಮಂತ್ರಿ ವಸುಂಧರಾ ರಾಜೇ ಕಟ್ಟಾ ಬೆಂಬಲಿಗ ಕರ್ನಲ್ ಸೋನಾ ರಾಮ್ಗೆ ಮಣೆಹಾಕಿದೆ.