ಭೋಪಾಲ್ ದಿಂದ ಕಣಕ್ಕಿಳಿಯಲು ಆಡ್ವಾಣಿಯನ್ನು ಆಹ್ವಾನಿಸಿದ ಕೈಲಾಶ ಜೋಶಿ

ಶುಕ್ರವಾರ, 14 ಮಾರ್ಚ್ 2014 (17:35 IST)
PR
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಕೈಲಾಶ ಜೋಶಿ ತಮ್ಮ ಕ್ಷೇತ್ರವನ್ನು ಲಾಲಕೃಷ್ಣ ಅಡ್ವಾಣಿಗೆ ಬಿಟ್ಟು ಕೊಡುವುದಾಗಿ ಹೇಳಿ ಎಲ್ಲರನ್ನೂ ದಿಗ್ಭ್ರಮೆಗೊಳಗಾಗುವಂತೆ ಮಾಡಿದ್ದಾರೆ.

"3 ದಿನಗಳ ಹಿಂದೆ ಅಡ್ವಾಣಿಯವರನ್ನು ಭೇಟಿಯಾಗಿ ಭೋಪಾಲ್ ನಿಂದ ಚುನಾವಣಾ ಕಣಕ್ಕೆ ಇಳಿಯಲು ಆಮಂತ್ರಣ ನೀಡಿದ್ದೇನೆ ಎಂದು ಕೈಲಾಶ ಜೋಶಿ "ಹೇಳಿದ್ದಾರೆ. ಜೋಶಿ ತಾನು ಆ ಕ್ಷೇತ್ರದಿಂದ ಸ್ಪರ್ಧಿಸಲಾರೆ ಎಂದು ಈಗಾಗಲೇ ಘೋಷಿಸಿದ್ದಾರೆ.

ತಮ್ಮ ಪ್ರಸ್ತಾವನೆಗೆ ಅವರ ಪ್ರತಿಕ್ರಿಯೆ ಏನಿತ್ತು ಎಂದು ಜೋಶಿಯವರನ್ನು ಕೇಳಿದಾಗ "ಆ ಬಗ್ಗೆ ವಿಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ" ಎಂದಿದ್ದಾರೆ ಎಂದು ಅವರು ಉತ್ತರಿಸಿದರು.

ಪಕ್ಷದಲ್ಲೂ ಅಡ್ವಾಣಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಊಹಾಪೋಹಗಳಿವೆ. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಪ್ರದೇಶ ಚುನಾವಣಾ ಸಮಿತಿ ಭೋಪಾಲ್ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯನ್ನು ಕೇಂದ್ರ ಚುನಾವಣಾ ಸಮಿತಿಗೆ ಸೇರುತ್ತದೆ ಎಂದು ಹೇಳಿದ್ದರಿಂದ ಈ ಊಹಾಪೋಹಕ್ಕೆ ಪುಷ್ಠಿ ನೀಡಿದಂತಾಗಿದೆ.

ವೆಬ್ದುನಿಯಾವನ್ನು ಓದಿ