ಮುಜಾಫರ್‌ನಗರ್: ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಂಸದನಿಗೆ ಪತ್ನಿಯೇ ಎದುರಾಳಿ

ಬುಧವಾರ, 19 ಮಾರ್ಚ್ 2014 (18:21 IST)
PTI
ಚುನಾವಣೆಗಳಲ್ಲಿ ವಿಶೇಷತೆಗಳಿಗೆ ಕೊರತೆಯಿರುವುದಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದಂಪತಿಗಳು ಪರಸ್ಪರ ಹಣಾಹಣಿ ನಡೆಸುತ್ತಿರುವುದು ಕ್ಷೇತ್ರದ ಜನತೆಯ ಕುತೂಹಲಕ್ಕೆ ಕಾರಣವಾಗಿದೆ.

ಬಹುಜನ ಸಮಾಜ ಪಕ್ಷದ ಸಂಸತ್ ಸದಸ್ಯ ಕದೀರ್ ರಾಣಾ ಅವರ ಪತ್ನಿಯಾದ ಶಾಹೀದಾ ಬೇಗಂ ತನ್ನ ಪತಿಯ ವಿರುದ್ಧ ಮುಜಾಫರ್‌ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಅಚ್ಚರಿ ಮೂಡಿಸಿದ್ದಾರೆ.

ಆಸಕ್ತಿಕರ ವಿಷಯವೆಂದರೆ, ರಾಣಾ ಮುಜಾಫರ್‌ನಗರದ ಹಾಲಿ ಸಂಸದರಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಕಳೆದ 2007ರಲ್ಲಿ ಸಮಾಜವಾದಿ ಪಕ್ಷವನ್ನು ತೊರೆದು ರಾಷ್ಟ್ರೀಯ ಲೋಕದಳ ಪಕ್ಷವನ್ನು ಸೇರಿದ್ದ ಸಂಸದ ಕದೀರ್ ರಾಣಾ, ನಂತರ 2009ರಲ್ಲಿ ಬಹುಜನ ಸಮಾಜ ಪಕ್ಷವನ್ನು ಸೇರಿದ್ದರು.

ಮುಜಾಫರ್‌ನಗರದಲ್ಲಿ ನಡೆದ ದಂಗೆ ಪ್ರಕರಣದಲ್ಲಿ ರಾಣಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ರಾಣಾ ಉದ್ರೇಕಕಾರಿ ಭಾಷಣ ನೀಡಿರುವುದು ದಂಗೆಗೆ ಕಾರಣವಾಗಿತ್ತು ಎಂದು ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ