ಮೋದಿಗೆ ಸೆಡ್ಡು ಹೊಡೆಯಲು ವಾರಣಾಸಿಯಲ್ಲಿ ಅತ್ಯಾಧುನಿಕ ಕಚೇರಿ ಆರಂಭಿಸಿದ ಕೇಜ್ರಿವಾಲ್

ಶುಕ್ರವಾರ, 18 ಏಪ್ರಿಲ್ 2014 (16:27 IST)
ಸಾಮಾಜಿಕ ಮಾಧ್ಯಮದ ಚಾಂಪಿಯನ್ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಸವಾಲೆಸೆಯಲು ಆಮ್ ಆದ್ಮಿ ಪಕ್ಷ ವಾರಣಾಸಿಯಲ್ಲೊಂದು ಅತ್ಯಾಧುನಿಕ ಚುನಾವಣಾ ಕಛೇರಿಯನ್ನು ನಿರ್ಮಿಸಿದೆ ಎಂದು ಆಪ್ ಪಕ್ಷದ ಮೂಲಗಳು ತಿಳಿಸಿವೆ.
PTI

ಆ ಕಛೇರಿಯಲ್ಲಿ ಅನೇಕ ವಿಭಾಗಗಳಿದ್ದು, ಕೇಜ್ರಿವಾಲ್ ಅವರ ಐಟಿ ತಂಡದ ಸದಸ್ಯರೊಬ್ಬರ ಪ್ರಕಾರ, 100 ಕ್ಕೂ ಹೆಚ್ಚು ಜನರು ಆ ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದಾರೆ.

ತಂಡದ ಮುಖ್ಯ ಉದ್ದೇಶ ಆಪ್ ಪಕ್ಷದ ವಿರುದ್ಧ ಸಾಮಾಜಿಕ ಜಾಲದಲ್ಲಿ ಹರಿದಾಡುತ್ತಿರುವ ಸುಳ್ಳು ಮತ್ತು ನಕಲಿ ಸುದ್ದಿಗಳ ವಿರೋಧಿಸುವುದು. ಬಳಿಕ ಅ ಫೇಸ್ಬುಕ್ ಮತ್ತು ಟ್ವಿಟರ್ ಮೂಲಕ ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ನೀಡುವುದು.

ಈ ಕಛೇರಿ ಅನೇಕ ವಿಭಾಗಗಳನ್ನು ಹೊಂದಿದೆ. ಐಟಿ ದತ್ತಾಂಶ ನಿರ್ವಹಣಾ ವಿಭಾಗ ಲೋಕಸಭಾ ಚುನಾವಣೆಗಳಿಗೆ ಸಂಬಂಧಿಸಿದ ಎಲ್ಲಾ ಅಂಕಿಅಂಶಗಳನ್ನು ಸಂಗ್ರಹಿಸುತ್ತದೆ.

ಮಾಧ್ಯಮ ತಂಡದ ಕಛೇರಿ ಸದಸ್ಯರು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಿಸಲಾದ ಅಥವಾ ಬಿತ್ತರಿಸಲ್ಪಟ್ಟ ಸುದ್ದಿಗಳ ಬಗ್ಗೆ ಗಮನ ನೀಡುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ