ಇಂಡಿಯಾಗೆ ಮಲಾಲಾ ಬರುವುದಿಲ್ಲ ; ಬಸವಶ್ರೀ ತೆಗೆದುಕೊಳ್ಳುವುದಿಲ್ಲ.!

ಬುಧವಾರ, 16 ಅಕ್ಟೋಬರ್ 2013 (11:42 IST)
PTI
PTI
ಚಿತ್ರದುರ್ಗದ ಮರುಘಾ ಮಠದಿಂದ ಘೋಷಿಸಿರುವ ಶ್ರೇಷ್ಠ ಬಸವ ಶ್ರೀ ಪ್ರಶಸ್ತಿಯನ್ನು ಪಡೆಯಲು ಮಲಾಲಾ ಭಾರತಕ್ಕೆ ಆಗಮಿಸುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಲಾಲ ಅವರು ಬಸವ ಶ್ರೀ ಪ್ರಶಸ್ತಿಯನ್ನು ಪಡೆಯುತ್ತಿರುವ ಮೊಟ್ಟ ಮೊದಲ ಪಾಕಿಸ್ತಾನಿ ನಿವಾಸಿಯಾಗಿದ್ದಾರೆ. ಯುವ ಹೋರಾಟಗಾರ್ತಿಯ ಸಾಧನೆಯನ್ನು ಪರಿಗಣಿಸಿದ ಮುರುಘಾ ಮಠ ಬಸವ ಶ್ರೀ ಪ್ರಶಸ್ತಿಯನ್ನು ಮಲಾಲಾಗೆ ನೀಡಿದೆ. ಆದ್ರೆ ಮಲಾಲಾ ಈ ಪ್ರಶಸ್ತಿಯನ್ನು ಸ್ವೀಕರಿಸಲು ಭಾರತಕ್ಕೆ ಆಗಮಿಸುವುದು ಅನುಮಾನವಾಗಿದೆ

ಮಲಾಲಾ ಮೇಲೆ ತಾಲೀಬಾನ್‌ ಭಯೋತ್ಪಾದಕರು ಕಣ್ಣಿಟ್ಟಿದ್ದು, ಆಕೆಯನ್ನು ಕೊಲ್ಲುವ ಹುನ್ನಾರ ನಡೆಸಿದ್ದಾರೆ. ಹೀಗಾಗಿ ಭದ್ರತೆಯ ಕಾರಣಕ್ಕೆ ಮಲಾಲಾ ಅವರು ಭಾರತಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ ಎಂದು ಮುರುಘಾ ಮಠದ ಶ್ರೀಗಳು ಹೇಳಿದ್ದಾರೆ. ಹೀಗಾಗಿ ಅವರು ಭಾರತಕ್ಕೆ ಬಂದಾಗ ಅಥವಾ ನಾವು ಅವರಿರುವ ಸ್ಥಳಕ್ಕೆ ಹೋಗಲು ಸಹಾಯಕವಾದಾಗ ಪ್ರಶಸ್ತಿಯನ್ನು ಮಲಾಲಾ ಅವರಿಗೆ ತಲುಪಿಸಲಾಗುತ್ತದೆ ಎಂದು ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ