ನೈಜಿರಿಯಾ ಭಾರತೀಯರ ಬಿಡುಗಡೆ

ಇಳಯರಾಜ

ಶನಿವಾರ, 16 ಜೂನ್ 2007 (14:52 IST)
ಕಳೆದ 16 ದಿನಗಳ ಹಿಂದೆ ಅಪಹರಣಕ್ಕೆ ಒಳಗಾಗಿದ್ದ ಭಾರತೀಯ ಮೂಲದ ನೌಕರರನ್ನು ಅಜ್ಞಾತ ಶಸ್ತ್ರಾಸ್ತ್ರಧಾರಿಗಳು ಬಿಡುಗಡೆ ಮಾಡಿದ್ದಾರೆ.

ಇಂಡೋನೇಷಿಯಾ ಮೂಲದ ಕಂಪನಿಯಲ್ಲಿ ಭಾರತೀಯ ಮೂಲದ ನೌಕರರು ಕೆಲಸ ಮಾಡುತ್ತಿದ್ದರು ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ವರದಿಮಾಡಿವೆ. ಇಂಡೋರನಮಾದ ವ್ಯವಸ್ಥಾಪಕ ನಿರ್ದೇಶಕ ಅರುಣ ತನೇಜಾ ಸಹಿತ ಹತ್ತು ಜನ ಕೆಲಸಗಾರರನ್ನು ಅಜ್ಞಾತ ಶಸ್ತ್ರಧಾರಿಗಳು ಅಪಹರಿಸಿದ್ದರು.

ಅಪಹೃತ ಭಾರತೀಯರ ಬಿಡುಗಡೆಗೆ ಭಾರತೀಯ ವಿದೇಶಾಂಗ ಸಚಿವಾಲಯ ನೈಜಿರಿಯಾ ಅಧಿಕಾರಿಗಳೊಂದಿಗೆ ಮಾತುಕತೆ ಪ್ರಯತ್ನ ನಡೆಸಿದ್ದರೆ ಇತ್ತ ಇಂಡೋರಮಾ ಕಂಪನಿಯು ಕೂಡ ತನ್ನ ನಿರ್ದೇಶಕರನ್ನು ಅಪಹರಣಕಾರರ ಜೋತೆ ಮಾತುಕತೆ ನಡೆಸಲು ನೈಜಿರಿಯಾಕ್ಕೆ ಕಳುಹಿಸಿತ್ತು.

ವೆಬ್ದುನಿಯಾವನ್ನು ಓದಿ