ಪಾಕ್ ರೋಗಿಯಿಂದ ಮಲೆಯಾಳಿ ವೈದ್ಯನ ಹತ್ಯೆ

ಇಲ್ಲಿನ ಅಲ್‌ ಅಹಲಿಯ ಆಸ್ಪತ್ರೆಯ ಮೂತ್ರಾಶಯ ರೋಗ ವಿಭಾಗದ ತಜ್ಞ ವೈದ್ಯರಾಗಿದ್ದ ತಿರುವನಂತಪುರದ ಡಾ| ರಾಜನ್‌ ಡೇನಿಯಲ್‌ (58ವ.) ಅವರನ್ನು ಕರ್ತವ್ಯ ನಿರತರಾಗಿದ್ದಾಗಲೇ ಇರಿದು ಸಾಯಿಸಲಾಗಿದೆ. ಡಾ| ಡೇನಿಯಲ್‌ ತಿರುವನಂತಪುರ ಸಮೀಪದ ಉಲೂರುನವರು.

ಚಿಕಿತ್ಸೆಗಾಗಿ ಬಂದಿದ್ದ ಪಾಕಿಸ್ಥಾನಿ ಪ್ರಜೆ ಮುಹಮ್ಮದ್‌ ಜಲೀಲ್‌ ಎನ್ನುವವ ಈ ಕೃತ್ಯ ಎಸಗಿದ್ದಾನೆ. ಆದರೆ ಕೃತ್ಯದ ಹಿಂದಿನ ಕಾರಣ ತಿಳಿದು ಬಂದಿಲ್ಲ. ಕಳೆದ ಕೆಲವು ಸಮಯದಿಂದ ಜಲೀಲ್‌ ಈ ಆಸ್ಪತ್ರೆಯಲ್ಲಿ ಕಿಡ್ನಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ. ಇದೇ ರೀತಿಯಲ್ಲಿ ಸಂಜೆ ಚಿಕಿತ್ಸೆಗಾಗಿ ಬಂದಿದ್ದ ಜಲೀಲ್‌ ವೈದ್ಯರಿದ್ದ ಕೊಠಡಿಯ ಬಾಗಿಲು ಮುಚ್ಚಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಈ ಘಟನೆ ಸಂಭವಿಸುವಾಗ ಅಲ್ಲಿ ಬೇರೆ ಯಾರೂ ಇರಲಿಲ್ಲ.

ಆಸ್ಪತ್ರೆಯ ಸಿಬ್ಬಂದಿಗಳು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಜಲೀಲ್‌ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬಯಸಿದ್ದ . ಡಾ| ಡೇನಿಯಲ್‌ ನಿರಾಕರಿಸಿದ ಕಾರಣ ರೊಚ್ಚಿಗೆದ್ದು ಅವರ ಮೇಲೆ ಹಲ್ಲೆ ಮಾಡಿರಬೇಕೆಂದು ಅನುಮಾನಿಸಲಾಗಿದೆ.

ವೆಬ್ದುನಿಯಾವನ್ನು ಓದಿ