ಸಿಲೆಟ್ ಇಸ್ಕಾನ್ ಮಂದಿರದಲ್ಲಿ ಹಿಂದು ಭಕ್ತರು ಮತ್ತು ಸಮೀಪದ ಮಸೀದಿಯ ಮುಸ್ಲಿಂ ಭಕ್ತರ ನಡುವೆ ಘರ್ಷಣೆ ಸಂಭವಿಸಿದೆ. ಭೂ ವಿವಾದಕ್ಕೆ ಸಂಬಂಧಿಸಿದ ಈ ಘರ್ಷಣೆಯಲ್ಲಿ ಕನಿಷ್ಟ 10 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಮಾಜಿ ವಾರ್ಡ್ ಸದಸ್ಯ ಜೆಬುನಾರ್ ಶಿರಿನ್ ಮತ್ತು ಇಸ್ಕಾನ್ ಮಂದಿರ ನೌಕರ ರಾಜೇಂದ್ರ ಕೇಶಬ್ ದಾಸ್ ಈ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ.