ನೇಪಾಳದಲ್ಲಿ ವಿನಾಶಕಾರಿ ಭೂಕಂಪ ನಡೆದು ಬರೊಬ್ಬರಿ 9 ದಿನಗಳು ಕಳೆದಿದ್ದು ಇನ್ನು ಸಹ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಪ್ರತಿದಿನದ ಕಾರ್ಯಾಚರಣೆ ಈಗ ಹಲವು ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿದೆ. ಮಕ್ಕಳು, ಯುವಕರು, ವೃದ್ಧರು ಸೇರಿದಂತೆ ಹಲವರು ಘಟನೆ ನಡೆದ ಹಲವು ಗಂಟೆಗಳ ನಂತರವೂ ಮೃಂತ್ಯುಜಯರಾಗಿ ಎದ್ದು ಬರುತ್ತಿರುವುದು ಆಶ್ಚರ್ಯವನ್ನು ತರಿಸುತ್ತಿದೆ.