ಕೆಲವು ದಿನಗಳ ಹಿಂದೆ ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಷಾ ಐವರು ಮೀನುಗಾರರಿಗೆ ಕ್ಷಮಾಪಣೆ ನೀಡುವ ಭರವಸೆ ನೀಡಿದ್ದರು.ಇದನ್ನು ಕೇಂದ್ರ ಸರ್ಕಾರದ ಸಾಧನೆ ಎಂದು ಬಿಜೆಪಿ ಮುಖಂಡ ನರಸಿಂಹ ಕರೆದಿದ್ದು, ಈ ಪ್ರಕಟಣೆ ಭಾವುಕಕ್ಷಣವಾಗಿದ್ದು, ಕೇಂದ್ರದ ಪ್ರಯತ್ನದಿಂದ ಸಾಧ್ಯವಾಗಿದೆ ಎಂದಿದ್ದಾರೆ.
ಮೀನುಗಾರರ ಬಿಡುಗಡೆಗೆ ಪ್ರಧಾನಿ ಪ್ರಯತ್ನಕ್ಕೆ ಪಕ್ಷ ಮೆಚ್ಚುಗೆ ಸೂಚಿಸಿದೆ ಎಂದು ಡಿಎಂಕೆ ನಾಯಕ ಎಳಂಗೋವನ್ ತಿಳಿಸಿದ್ದಾರೆ. ಭಾರತದ ಮೇಲ್ಮನವಿ ವಾಪಸು ಪಡೆಯುವಂತೆ ಅಧ್ಯಕ್ಷ ರಾಜಪಕ್ಷೆ ಒತ್ತಾಯಿಸಿದ್ದರು. ಏಕೆಂದರೆ, ಅದು ಈ ಪ್ರಕರಣವನ್ನು 6 ತಿಂಗಳವರೆಗೆ ಎಳೆದು ಅಧ್ಯಕ್ಷರು ಕ್ಷಮಾಪಣೆ ನೀಡುವುದನ್ನು ವಿಳಂಬಿಸುತ್ತದೆ.