ಈ ಸುದ್ದಿಯ 10 ಬೆಳವಣಿಗೆಗಳು ಕೆಳಗಿನಂತಿವೆ.
ಉಗ್ಯುರ್ ಕಾರ್ಯಕರ್ತ ದೋಲ್ಕುನ್ ಇಸಾ ಅವರಿಗೆ ಧರ್ಮಶಾಲಾದಲ್ಲಿ ನಡೆಯುವ ಪ್ರಜಾಪ್ರಭುತ್ವ ಸಮ್ಮೇಳನದಲ್ಲಿ ಈ ವಾರ ಭಾಗವಹಿಸಲು ಪ್ರವಾಸಿ ವೀಸಾವನ್ನು ನೀಡಲಾಗಿತ್ತು. ದಲೈಲಾಮಾ ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸುವರೆಂದು ನಿರೀಕ್ಷಿಸಲಾಗಿತ್ತು. ಜರ್ಮನಿಯಲ್ಲಿ ಅಜ್ಞಾತರಾಗಿ ವಾಸಿಸುತ್ತಿರುವ ಇಸಾರನ್ನು ಚೀನಾ ಭಯೋತ್ಪಾದಕರೆಂದು ಕರೆದಿದ್ದು ಅವರಿಗೆ ವೀಸಾ ನೀಡಿದ್ದಕ್ಕೆ ಪ್ರತಿಭಟನೆ ಸೂಚಿಸಿತ್ತು.
ಈ ಕುರಿತು ಇಸಾ ಪ್ರತಿಕ್ರಿಯಿಸಿ, ಭಾರತದ ಅಧಿಕಾರಿಗಳು ನನ್ನ ವೀಸಾ ರದ್ದುಮಾಡಿದ್ದಕ್ಕೆ ನಿರಾಶೆಯಾಗಿದೆ. ಭಾರತ ಸರ್ಕಾರದ ಕಷ್ಟದ ಸ್ಥಿತಿ ನನಗೆ ಅರ್ಥವಾಗುತ್ತದೆ. ನನ್ನ ಪ್ರವಾಸ ಇಂತಹ ವಿವಾದ ಹುಟ್ಟುಹಾಕಿದ್ದಕ್ಕೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.
ಚೀನಾ ಇಸಾ ವಿರುದ್ಧ ಇಂಟರ್ಪೋಲ್ ನೋಟಿಸ್ ಇರುವುದನ್ನು ಉಲ್ಲೇಖಿಸಿ, ಅವರನ್ನು ವಿಚಾರಣೆಗೆ ಒಳಪಡಿಸುವುದು ಪ್ರಸಕ್ತ ರಾಷ್ಟ್ರಗಳ ಕರ್ತವ್ಯವಾಗಿದೆ ಎಂದು ತಿಳಿಸಿತ್ತು. ದೋಲ್ಕುನ್ ಈಸಾಗೆ ಭಾರತ ವೀಸಾ ನೀಡುವ ಮೂಲಕ ಅಜರ್ ಮಸೂದ್ ನಿಷೇಧಕ್ಕೆ ಅಡ್ಡಗಾಲು ಹಾಕಿದ ಚೀನಾಕ್ಕೆ ಭಾರತದ ತಿರುಗೇಟು ಎಂದು ಭಾವಿಸಲಾಗಿತ್ತು. ಆದರೆ ಭಾರತ ಉಲ್ಟಾ ಹೊಡೆದಿರುವುದನ್ನು ನೋಡಿದರೆ ಚೀನಾದಿಂದ ತೀವ್ರ ಒತ್ತಡ ಬಂದಿದೆಯೆಂದು ಭಾವಿಸಲಾಗುತ್ತಿದೆ.