ಪೋಲಿಸರು ಹತ್ತಿರ ಬರುತ್ತಿರುವುದನ್ನು ಕಂಡ ಆತ ಪೊದೆಗಳೊಳಗೆ ಇನ್ನಷ್ಟು ಒಳಗಡೆ ನುಸುಳಿದ. ಇದರಿಂದ ಜೇನು ಗೂಡು ಅಲುಗಾಡಿತು. ಆಗ, ಜೇನುಗಳು ಗೂಡಿನಿಂದ ಎದ್ದು ಆತನ ಮೇಲೆ ಮುತ್ತಿಗೆ ಹಾಕಿದವು. ತಕ್ಷಣ ಕೆಲವೇ ಸೆಕೆಂಡಿಗಳಲ್ಲಿ ಆತ ಪೊದೆಯೊಳಗಿಂದ ಖುದ್ದು ತಾನೆ ಹೊರಗಡೆ ಬರುವಷ್ಟರಲ್ಲಿಯೇ ಜೇನು ಹುಳುಗಳು ಆತನನ್ನು ಕಚ್ಚಿದ್ದವು. ಕೊನೆಗೆ ಹೇಗಾದರು ಮಾಡಿ ಜೇನು ಹುಳುಗಳಿಂದ ಆತನನ್ನು ಉಳಿಸಲಾಯಿತು. ಈಗ ಕಳ್ಳ ಮಹಾಶಯ ಪೋಲಿಸರ ಪಹರೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.