ಪತ್ರದಲ್ಲಿ ರಾಷ್ಟ್ರಪತಿಯನ್ನಾತ 'ಶೀ ದಾದಾ' ಎಂದು ಸಂಭೋಧಿಸಿದ್ದಾನೆ. ಪತ್ರವನ್ನು ಪೋಸ್ಟ್ ಮಾಡಲಾಗಿಲ್ಲ. ಆದರೆ ತನ್ನ ಮಗ ಬರೆದ ಪತ್ರವನ್ನು ಮೆಚ್ಚಿದ ಆತನ ತಂದೆ ಅದನ್ನು ವಿ- ಚೆಟ್ನಲ್ಲಿ ಪೋಸ್ಟ್ ಮಾಡಿದ. ಈ ಪತ್ರ ಓದಿದ ರಾಷ್ಟ್ರಪತಿಯವರಿಗೆ ಏನೆನಿಸಿತೋ ಗೊತ್ತಿಲ್ಲ. ಆದರೆ ಅವರ ಮಾಧ್ಯಮ ಸಲಹಾ ಮಂಡಳಿಗೆ ಇದು ಸರಿ ಕಾಣಲಿಲ್ಲ. ಅವರಿದನ್ನು ಡಿಜಿಟಲ್ ಅವೃತ್ತಿಯಿಂದ ತೆಗೆದು ಹಾಕಿದ್ದಾರೆ.
ಬಾಲಕ ಬರೆದ ಪತ್ರದಲ್ಲಿ ಹೀಗಿದೆ: "ಚೀನಾಕ್ಕೆ ಮಂಗಳ ಗೃಹಕ್ಕೆ ಹೋಗುವ ಯೋಜನೆಯನ್ನು ಮಾಡಬೇಕಿದೆ. ಭಾರತ, ರಶಿಯಾ, ಅಮೇರಿಕಾ ಮತ್ತು ಯುರೋಪ್ ದೇಶಗಳು ಸಹ ಈ ದಿಶೆಯಲ್ಲಿ ಕಾರ್ಯತತ್ಪರವಾಗಿವೆ. ನಮಗೂ ಸಹ ಆದಷ್ಟು ಬೇಗ ಈ ಕುರಿತು ಯೋಜಿಸಬೇಕಿದೆ".