ವ್ಯಾಪಾರ ಸ್ನೇಹಿ ದೇಶವಾಗುವ ನಿಟ್ಟಿನಲ್ಲಿ ಭಾರತ ಹೆಜ್ಜೆ ಇಡುತ್ತಿದೆ ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ಸಮಯ ಮೀರುವ ಮುನ್ನ ಭಾರತದಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸುವಂತೆ ಮತ್ತು ವಿಸ್ತರಿಸುವಂತೆ ಅಮೇರಿಕಾದ ಅಗ್ರ ಸಂಸ್ಥೆಗಳನ್ನು ಪ್ರೇರೇಪಿಸಿದ್ದಾರೆ.
2009ರ ವೈಬ್ರಂಟ್ ಗುಜರಾತ್ ವಾಣಿಜ್ಯ ಶೃಂಗ ಸಭೆಯಲ್ಲಿ ಉದ್ಯಮ ಸಮುದಾಯವನ್ನುದ್ದೇಶಿಸಿ ಮಾಡಿದ ಭಾಷಣವನ್ನು ಉಲ್ಲೇಖಿಸಿದ ಅವರು, ಗುಜರಾತಿಗೆ ಬರಲು ವಿಳಂಬ ಮಾಡಬೇಡಿ, ಸರತಿ ಸಾಲು ಉದ್ದವಿರಬಹುದು, ಆಗ ನೀವು ಹಿಂದುಳಿಯಬೇಕಾಗುತ್ತದೆ ಎಂದು ಆ ಸಮಯದಲ್ಲಿ ಹೇಳಿದ್ದೆ. ಈಗಲೂ ನಾನು ಆತ್ಮವಿಶ್ವಾಸದೊಂದಿಗೆ ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ಕ್ಯೂ ಉದ್ದವಿರಬಹುದು , ಶೀಘ್ರ ಬನ್ನಿ ಎಂದು ಮೋದಿ ಅನಿವಾಸಿ ಉದ್ಯಮಪತಿಗಳಿಗೆ ಕರೆ ನೀಡಿದ್ದಾರೆ.