ರಾಜನ್ ಇರುವ ಮಾಹಿತಿ ತಿಳಿದ ದಾವೂದ್, ತನ್ನ ಬಂಟರನ್ನು ಹತ್ಯೆಗೈಯ್ಯುವ ಸಲುವಾಗಿಯೇ ಆಸ್ಟ್ರೇಲಿಯಾಗೆ ಕಳುಹಿಸಿದ್ದ. ಅಲ್ಲದೆ ಎಲ್ಲಾ ಅಗತ್ಯ ಸಿದ್ಧತೆಗಳೊಂದಿಗೆ ಸದ್ಧರಾಗಿದ್ದ ಶಾರ್ಪ್ ಶೂಟರ್ಸ್, ಸ್ಥಳಕ್ಕೆ ತೆರಳಿ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಇದನ್ನರಿತ ಚೋಟಾ ರಾಜನ್ ಕೃತ್ಯ ಆರಂಭವಾಗುವ ಮುನ್ನವೇ ಮುನ್ನವೇ ಸ್ಥಳದಿಂದ ಕಾಲ್ಕಿತ್ತು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಹೇಳಲಾಗಿದೆ.