ನೇಪಾಳದಲ್ಲಿ ಬಾರತೀಯ ರಕ್ಷಣಾ ಪಡೆ, ಸೈನಿಕರ ಚುರುಕಿನ ಕಾರ್ಯಾಚರಣೆ ವಿಶ್ವದಾದ್ಯಂತ ಪ್ರಶಂಸೆಗೆ ಒಳಗಾಗಿದ್ದು, ಭಾರತೀಯರಂತೆ ನೀವ್ಯಾಕೆ ಚಟುವಟಿಕೆಯಿಂದಿಲ್ಲ ಎಂದು ಚೀನಾದ ಮಾಧ್ಯಮಗಳು ತಮ್ಮ ದೇಶದ ರಕ್ಷಣಾ ಪಡೆ ಸಿಬ್ಬಂದಿಗಳಿಗೆ ಪ್ರಶ್ನಿಸಿವೆ.
ನೇಪಾಳದಲ್ಲಿ ಕಳೆದ ವಾರ ಸಂಭವಿಸಿದ ಭೀಕರ ಭೂಕಂಪದ ಪರಿಣಾಮ ಕಷ್ಟಕ್ಕೆ ಸಿಲುಕಿಕೊಂಡಿದ್ದ ಸಾವಿರ ಸಾವಿರ ಭಾರತೀಯರನ್ನು ರಕ್ಷಿಸಲಾಗಿದ್ದು ಸ್ವದೇಶಕ್ಕೆ ಹಿಂತಿರುಗಿ ಕರೆತರಲಾಗಿದೆ. ಅದರ ಎಲ್ಲ ಶ್ರೇಯಸ್ಸು ಸಲ್ಲಬೇಕಾದದ್ದು ಭಾರತೀಯ ರಕ್ಷಣಾ ಪಡೆಗೆ. ಆದರೆ ಚೀನಾದ ಸುಮಾರು 8 ಸಾವಿರ ನಾಗರಿಕರು ಇನ್ನೂ ನೇಪಾಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದು ಚೀನಾದ ಮಾಧ್ಯಮಗಳು ತಮ್ಮ ಸೈನಿಕರ ವಿರುದ್ಧ ಕಿಡಿಕಾರಲು ಕಾರಣವಾಗಿದೆ.
ನೇಪಾಳದ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಮತ್ತೆ ಭೂಕಂಪವಾಗಬಹುದೆಂಬ ಭಯದಿಂದ ಬೀದಿಗಳಲ್ಲಿ ಟೆಂಟ್ಗಳನ್ನು ಹಾಕಿಕೊಂಡಿದ್ದ ಸಾವಿರಾರು ಜನ ಈಗ ಮನೆಗಳಿಗೆ ಮರಳುತ್ತಿದ್ದಾರೆ. ಪರಿಹಾರ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ 6,200 ತಲುಪಿದೆ.