ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದು, ನೆರೆಯಲ್ಲಿರುವ ಒಂದು ರಾಷ್ಟ್ರ ಭಯೋತ್ಪಾದಕರನ್ನು ಉತ್ಪಾದಿಸಿ ರಫ್ತು ಮಾಡುತ್ತಿದೆ ಎಂದು ಪರೋಕ್ಷವಾಗಿ ದೂರಿದರು. ಅಂತಾರಾಷ್ಟ್ರೀಯ ಸಮುದಾಯ ಈ ರಾಷ್ಟ್ರವನ್ನು ಒಂಟಿಯಾಗಿಸಿ, ದಿಗ್ಬಂಧನ ಹೇರಬೇಕು ಎಂದು ಆಗ್ರಹಿಸಿದರು.